ಕಾರ್ಮಿಕ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಚಿಂತನೆ : ಸಚಿವ ಶಿವರಾಮ್ ಹೆಬ್ಬಾರ್

ಬೆಂಗಳೂರು :ಕಾರ್ಮಿಕ ಇಲಾಖೆಯಲ್ಲಿ ಬದಲಾವಣೆ ತರವು ನಿಟ್ಟಿನಲ್ಲಿ ಎರಡು ವಿಧೇಯಕಗಳನ್ನು ಜಾರಿಗೆ ತರುವುದಾಗಿ ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಇಂದು ಇಲಾಖೆ ಯೋಜನೆಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,ಆಟೋ,ಲಾರಿ,ಟ್ರಕ್ ಚಾಲಕರು,ಮೆಕಾನಿಕ್ ಗಳು ಸೇರಿದಂತೆ ಬಡತನ ರೇಖೆಗಿಂತ ಕೆಳಗಿ ರುವ ಕುಟುಂಬಗಳಿಗೆ ಹೊಸ ವಿಧೇಯಕದಿಂದ ಅನುಕೂಲವಾಗಲಿದೆ.ಆರ್ಥಿಕ ಇಲಾಖೆಯಿಂದ ಅನುಮೋದನೆ ದೊರಕಿದೆ.ಕರಡು ಮಸೂದೆಯನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಅನು ಮೋದನೆ ಪಡೆದು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಹೇಳಿದರು.

ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ,ಆರೋಗ್ಯ,ವಿವಾಹ ಹಾಗೂ ಅಪಘಾತ ವಿಮೆ 5 ಲಕ್ಷ ರೂ  ಹೊಸ ವಿಧೇಯಕದಲ್ಲೂ ಅಳವಡಿಸಲಾಗಿದೆ.ಒಂದು ವರ್ಷಕ್ಕೆ ಅಂದಾಜು 90 ಕೋಟಿ  ರೂ. ಅನುದಾನ ಮೀಸಲಿಡಲಿದ್ದೇವೆ.ಈ ಹಣದಿಂದ ಬಡವರ್ಗಕ್ಕೆ ಅನುಕೂಲವಾಗಲೆಂದು  ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಅನುಷ್ಠಾನ ತರಲಾಗುವುದು.ಹೊಸ ಕಾಯ್ದೆಯಿಂದ  ಅಂದಾ ಜು  15 ಲಕ್ಷ ಆಟೋ ರಿಕ್ಷಾ ಚಾಲಕರು ಸೇರಿದಂತೆ ಅಂದಾಜು 25 ಲಕ್ಷ ಮಂದಿಗೆ ಉಪಯೋಗ ವಾಗಲಿದೆ.ಹಾಗಾಗಿ ಅತೀ ಶೀಘ್ರದಲ್ಲೇ ಕಾನೂನು ತರಲಾಗುವುದು ಎಂದರು.

ಖಾಸಗಿ,ಸರ್ಕಾರ ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.ಆದರೆ, ಹೊರಗುತ್ತಿಗೆ ಸಂಸ್ಥೆಗಳು ಸರ್ಕಾರದ ಹಿಡಿತದಲ್ಲಿ ಇಲ್ಲ.ಇಎಫ್,ಪಿಎಫ್ ಕೇಳಿದರೆ ಕೆಲಸದಿಂದ ತೆಗೆದುಹಾಕುತ್ತಾರೆ.ಏಜೆನ್ಸಿಗಳಿಗೆ ಸರ್ಕಾರದ ಯಾವುದೇ ಹಿಡಿತ ಇಲ್ಲ ಹಾಗಾಗಿ ಬಹಳ ಜನಕ್ಕೆ ಶೋಷಣೆ ಆಗುತ್ತಿದೆ.ಈ ಬಗ್ಗೆ ನಮಗೆ ಸಾಕಷ್ಟು ದೂರುಗಳು ಬಂದಿವೆ.ಗುತ್ತಿಗೆ ಏಜೆನ್ಸಿಗಳ ನಿಯಂತ್ರಣಕ್ಕಾಗಿ ಒಂದು ಬಿಲ್ ತರಲು ಉದ್ದೇಶಿಸಲಾಗಿದೆ.ಹಾಗಾಗಿ,ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಒಂದು ತಂಡ ರಚನೆ ಮಾಡುತ್ತೇವೆ.ಸಮಿತಿಯು ಅದರ ಸಾಧಕ-ಬಾಧಕಗಳ ಬಗ್ಗೆ ಪರಾಮರ್ಶೆ ನಡೆಸಿ ವರದಿ ನೀಡಲಿದ್ದು,ವರದಿ ಬಳಿಕ ಈ ವಿಧೇಯಕ ತಂದು ವಿದ್ಯಾವಂತ ನಿರುದ್ಯೋಗಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಕಾರ್ಮಿಕ ಅದಾಲತ್ : ಇವತ್ತು ಕಾರ್ಮಿಕ ಇಲಾಖೆ ಎರಡು ಗಂಟೆಗಳ ಕಾಲ ಇಡೀ ಕಾರ್ಮಿಕ ಇಲಾಖೆಯ ಮುಖ್ಯಸ್ಥರ ಜೊತೆಗೆ ಸಭೆ ಮಾಡಿದ್ದೇವೆ.ಕಾರ್ಮಿಕ ಇಲಾಖೆಯಲ್ಲಿ ಬಾಕಿ ಇರುವ ಅರ್ಜಿಗಳಿಗೆ ಪರಿಹಾರ ಸಿಕ್ಕಿಲ್ಲ.ಇದಕ್ಕೆ ದಿನ ನಿತ್ಯ ದೂರು ಬರುತ್ತಿದ್ದವು.ಹಾಗಾಗಿ,ಇದಕ್ಕೆ ಪರಿಹಾರ ಕಂಡುಕೊಳ್ಳಲು ಒಂದು ತಿಂಗಳ ಕಾಲ ‘ಕಾರ್ಮಿಕ ಅದಾಲತ್’ ಮಾಡಲಾಗುವುದು.ನಾನಾ ಕಾರಣ ಗಳಿಗೆ ಸುಮಾರು 50 ಸಾವಿರ ಅರ್ಜಿಗಳು ಬಾಕಿ ಉಳಿದಿವೆ.ಸರಿಯಾದ ಸಮಯಕ್ಕೆ ಅರ್ಜಿ ಸಲ್ಲಿಸಿಲ್ಲ‌.ಈ ಎಲ್ಲಾ ಕಾರಣಗಳನ್ನು ಬದಿಗಿಟ್ಟು .ಎಲ್ಲಾ ಅರ್ಜಿಗಳನ್ನು ಪರಿಗಣಿಸಬೇಕು ಎಂದು ತೀರ್ಮಾನ ಮಾಡಿದ್ದೇವೆ.ಸೆಪ್ಟೆಂಬರ್ 16ರೊಳಗೆ  ಎಲ್ಲರ ಖಾತೆಗೆ ಹಣ ಜಮೆ ಆಗಲಿದೆ.ಇದಕ್ಕಾಗಿ ಆರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದೇನೆ .

ಒಂದು ಅರ್ಜಿಯೂ ಪೆಂಡಿಂಗ್ ಇರಬಾರದು‌.ಎಲ್ಲಾ ಸಮಸ್ಯೆ ಈಗಲೇ ಪರಿಹಾರ ಆಗಬೇಕು.ಇದೇ ತಿಂಗಳು ಎಲ್ಲಾ ಕಡೆ ಆಟೋದಲ್ಲಿ ಪ್ರಚಾರ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಮ್ಮ ಅಧಿಕಾರಿಗಳ ಮೇಲೆ ನಮಗೆ ವಿಶ್ವಾಸ ಇದೆ.ಶೇ 99 ರಷ್ಟು  ಎಲ್ಲಾ ಅರ್ಜಿಗಳು ವಿಲೇವಾರಿ ಆಗಬೇಕು.ಇದರಿಂದ ಕಾರ್ಮಿಕರಿಗೆ ನ್ಯಾಯ ಸಿಗಬೇಕು ಎಂದರು.

ಕೋವಿಡ್ ಸಂದರ್ಭದಲ್ಲಿ ಕಾರ್ಮಿಕರಿಗೆ ಒಂದು ಸಾವಿರ ಕೋಟಿ ರೂ. ಪರಿಹಾರ ನೀಡಿದ್ದೆವು. ಹೈಕೋರ್ಟ್ ಸೂಚನೆ ಮೇರೆಗೆ ನೂರು ಕೋಟಿ ಡ್ರೈ ಫ್ರೂಟ್ ನೀಡಿದ್ದೇವೆ ಎಂದು ಹೇಳಿದರು.

ವ್ಯಾಕ್ಸಿನ್ ಖರೀದಿ : ಕೋವಿಶೀಲ್ಡ್ ವ್ಯಾಕ್ಸಿನ್ ತೆಗೆದುಕೊಳ್ಳಲು ಇಲಾಖೆ ನಿರ್ಧಾರ ಮಾಡಿದೆ. ಜೊತೆಗೆ ಕಾರ್ಮಿಕರ ಸ್ಥಳದಲ್ಲಿ ವ್ಯಾಕ್ಸಿನ್ ನೀಡುವ ಕಾರ್ಯ ಆಗುತ್ತದೆ ಎಂದರು.

ಇ-ಶ್ರಮ್ ಪೋರ್ಟಲ್ ಇಂದಿನಿಂದ ಆರಂಭ : ಅಸಂಘಟಿತ ಕಾರ್ಮಿಕ ಬಗ್ಗೆ ಕಾಳಜಿಯಿಂದ ಅಸಂಘಟಿತ ಕಾರ್ಮಿಕರ ನೋಂದಣಿಗಾಗಿ ಕೇಂದ್ರ ಸರ್ಕಾರ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ ಅಭಿವೃದ್ಧಿಪಡಿಸಿರುವ  ಇ-ಶ್ರಮ್ ಪೋರ್ಟಲ್  ಇಂದಿನಿಂದ ಆರಂಭವಾಗುತ್ತಿದೆ. ಇದರಿಂದ ಎಲ್ಲಾ ವರ್ಗದ ಅಸಂಘಟಿತ ಕಾರ್ಮಿಕರಿಗೆ ಅನುಕೂಲ ಆಗುತ್ತದೆ. 15 ರೂ. 

ಕೊಟ್ಟು ನೊಂದಾಯಿಸಿಕೊಳ್ಳಬೇಕು,ಒಂದು ವರ್ಷಕ್ಕೆ ಪಿಎಂಎಸ್ ಬಿವೈ ಲಾಭವನ್ನು ಪಡೆಯು ತ್ತಾರೆ.ಆಕಸ್ಮಿಕ ಸಾವು ಪೂರ್ಣ ಅಂಗವೈಕಲ್ಯಕ್ಕೆ 2 ಲಕ್ಷ ರೂ. ಬಾಗಶಃ ಅಂಗವೈಕಲ್ಯಕ್ಕೆ 1 ಲಕ್ಷ ರೂ.  ಸೌಲಭ್ಯ ಸಿಗುತ್ತದೆ. ಇದಕ್ಕೆ ಸಂಬಂಧಿಸಿದಂತೆ 16 ಲಕ್ಷ ಈಗಾಗಲೇ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಎಲ್ಲಾ ವರ್ಗದ ಸಂಘಟಿತ ಕಾರ್ಮಿಕರು ಇದರಲ್ಲಿ ಬರುತ್ತಾರೆ.ಕರ್ನಾಟಕದಲ್ಲಿ ಶೇ. 33 ರಷ್ಟು  ಅಸಂಘಟಿತ ಕಾರ್ಮಿಕರಿಗೆ ಅನುಕೂಲ ಆಗುತ್ತದೆ ಎಂದು ವಿವರಿಸಿದರು.

ನೇಮಕಾತಿಗೆ ನಿರ್ಧಾರ : ಗ್ರೂಪ್ ಡಿ ನೌಕರರ ಸಮಸ್ಯೆ ಇದೆ ಎಂದು ನಮ್ಮ ಅಧಿಕಾರಿಗಳು ಹೇಳಿ ದ್ದಾರೆ.ಕೆಪಿಎಸ್ ಸಿ ಅಥವಾ ನೇರ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ತೀರ್ಮಾನ ಮಾಡಿದ್ದೇವೆ. ಇದರ  ಬಗ್ಗೆ ಮುಖ್ಯಮಂತ್ರಿಗಳ ಜತೆ ಚೆರ್ಚೆ ಮಾತನಾಡುತ್ತೇನೆ.ಕಿತ್ತೂರು ರಾಣಿ ಚೆನ್ನಮ್ಮ ಹೆಸರಿನಲ್ಲಿ ಶಿಶು ಪಾಲನಾ ಕೇಂದ್ರ ತೆರೆದು ಕಾರ್ಮಿಕರಿಗೆ ಮೊಬೈಲ್ ಕ್ಲಿನಿಕ್,ಹೊರಗಡೆ ಕಾರ್ಮಿಕರಿಗೆ ಉಳಿದುಕೊಳ್ಳಲು ಟ್ರಾನ್ಸಿಟ್ ನಿರ್ಮಾಣ ಮಾಡುತ್ತೇವೆ.ಅನೇಕ ಕಾರ್ಮಿಕರ ಹಿತ ರಕ್ಷಣೆಯನ್ನು ಕಾಪಾಡುವವರ ಜೊತೆಗೆ ಚರ್ಚೆ ಮಾಡಿದ್ದೇವೆ.ಕಟ್ಟಡ ಕಾರ್ಮಿಕರ ಮಕ್ಕಳಿಗೆ ಟ್ಯಾಬ್ ಕೊಡಲು ನಿರ್ಧಾರ ಮಾಡಿದ್ದೇವೆ.140  ಕೋಟಿ  ರೂ.ಪ್ರತಿ ವರ್ಷ ಶಿಕ್ಷಣಕ್ಕೆ ನೀಡುತ್ತಿದ್ದೆವು. 

ಎಲ್ಲಾ ಕಾರ್ಮಿಕ ಮಕ್ಕಳು ಐಐಎಂ, ಐಐಟಿ,ಕೆಎಎಸ್, ಐಎಎಸ್ ಓದಲು ನಮ್ಮ ಇಲಾಖೆಯಲ್ಲಿ ಹಣವನ್ನು ಬರಿಸಲಾಗುತ್ತದೆ ಎಂದು ಹೇಳಿದರು.

ಇಎಸ್ ಐ ಆಸ್ಪತ್ರೆ ಎಲ್ಲಾ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗುತ್ತದೆ.ನಮ್ಮ ಕಾರ್ಮಿಕರು ಕಟ್ಟುವ ಕಟ್ಟಡದಲ್ಲಿ ನಮ್ಮ ಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ಸಿಗುತ್ತಿಲ್ಲ.ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಜೊತೆಗೆ ಮಾತನಾಡುತ್ತೇನೆ.ಈಗಾಗಲೇ ಮಂತ್ರಿಗಳ ಜೊತೆಗೆ ಮಾತನಾಡಿದ್ದೇನೆ. ಇಎಸ್ ಐ ಆಸ್ಪತ್ರೆಗೆ ಸಂಬಂಧಿಸಿದಂತೆ ಎಲ್ಲಾ ಆಮೂಲಾಗ್ರ ಬದಲಾವಣೆ ತರಲಾಗುವುದು.ಎಂ ಎಂ ಇಂಡಸ್ಟ್ರೀಸ್ ನಲ್ಲಿ 4 ಮಂದಿ ಕಾರ್ಮಿಕರು ಮೃತ ಪಟ್ಟಿದ್ದರು.ಆ ನಾಲ್ಕು ಕುಟುಂಬಕ್ಕೆ ಮೂರು ಲಕ್ಷ ಪರಿಹಾರ ಕೊಡಲು ನಮ್ಮ ಇಲಾಖೆ ನಿರ್ಧಾರ ಮಾಡಿದೆ.ಕಲ್ಯಾಣ ಮಂಡಳಿ ಮೂಲಕ ಇದನ್ನು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

ರಾಜೀನಾಮೆ ಕೇಳುವುದು ವಿರೋಧ ಪಕ್ಷಗಳ ಕೆಲಸ : ಮೈಸೂರಿನಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಕುರಿತ ಪ್ರತಿಕ್ರಿಯಿಸಿದ ಅವರು,ಮೈಸೂರಿನಲ್ಲಿ ನಡೆದ ಘಟನೆ ಅಘಾತ ಕಾರಿ.ಯಾವುದೇ  ಸರ್ಕಾರ ಇದ್ದಾಗಲೂ ಇಂತಹ ಘಟನೆಗಳು ನಡೆದಿವೆ.ಕಾಂಗ್ರೆಸ್ ಸರ್ಕಾರ ಇದ್ದಾ ಗಲೂ ನಡೆದಿವೆ.ರಾಜೀನಾಮೆ ಕೇಳೋದು ವಿರೋಧ ಪಕ್ಷಗಳ ಕೆಲಸ.ಅಪರಾಧಿಗಳನ್ನು ಬಿಡುವ ಮಾತೆ ಇಲ್ಲ.ಯಾರು ಎಷ್ಟೇ ದೊಡ್ಡವರಾದರೂ ಅವರಿಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

More News

You cannot copy content of this page