ಬೆಂಗಳೂರು : ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರೆ ಮೊದಲು ಈ ದೇಶ ಮಾರಾಟ ಆಗದಂತೆ ತಡೆಯಬೇಕು.ಈ ದೇಶದಲ್ಲಿ ವಿದ್ಯಾರ್ಥಿಗಳಿಗೂ ಭವಿಷ್ಯವಿದೆ.ಆದ್ದರಿಂದ ಇತಿಹಾಸವನ್ನು ಚೆನ್ನಾಗಿ ಅರಿತು ದೇಶ ಉಳಿಸಲು ಮುಂದಾಗಿ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್ (ಎನ್ಎಸ್ಯುಐ)ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ವಿದ್ಯಾರ್ಥಿ ಸಮೂಹಕ್ಕೆ ದೇಶದ ಚರಿತ್ರೆಯನ್ನು ಅರ್ಥ ಮಾಡಿಸುತ್ತಲೇ ಸಂವಿಧಾನ ದ ಮಹತ್ವವನ್ನು ತಿಳಿಸಿ ಶಿಕ್ಷಣ-ಸಂಘಟನೆ-ಹೋರಾಟದ ಮಾರ್ಗದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಅವರು ಕರೆ ನೀಡಿದರು.
ವಿದ್ಯಾರ್ಥಿ ಕಾಂಗ್ರೆಸ್ಗೆ 1971 ರಲ್ಲಿ ಇಂದಿರಾಗಾಂಧಿ ಅವರು ಅಡಿಪಾಯ ಹಾಕಿದರು.ದೇಶದ ವಿದ್ಯಾರ್ಥಿ-ಯುವಜನರನ್ನು ಸೃಜನಶೀಲರನ್ನಾಗಿ,ಪ್ರಜಾತಾಂತ್ರಿಕ ಮಾರ್ಗದಲ್ಲಿ ಸನ್ನದ್ದ ಗೊಳಿಸಿದರೆ ದೇಶವನ್ನು 21 ನೇ ಶತಮಾನಕ್ಕೆ ಮುನ್ನಡೆಸಲು ಸಾಧ್ಯವಿದೆ ಎಂದು ರಾಜೀವ್ಗಾಂಧಿ ಅವರು ಆತ್ಮವಿಶ್ವಾಸದಿಂದ ನುಡಿದಿದ್ದರು.
ರಾಹುಲ್ಗಾಂಧಿ ಅವರು ವಿದ್ಯಾರ್ಥಿ ಕಾಂಗ್ರೆಸ್ಗೆ ಕಾನೂನು ಬದ್ದ ಚೌಕಟ್ಟು ನೀಡಿದರು.ಹೀಗಾಗಿ ಇಂದು ವಿದ್ಯಾರ್ಥಿ ಸಂಘಟನೆ ಮತ್ತು ವಿದ್ಯಾರ್ಥಿ ಚಳವಳಿ ಇಡಿ ದೇಶಕ್ಕೆ ವ್ಯಾಪಿಸಿದೆ.ಸಾಮಾಜಿಕ ಚಳವಳಿಗಳು ವಿದ್ಯಾರ್ಥಿಗಳು ಸಮಾಜವನ್ನು ಗ್ರಹಿಸಲು,ದೇಶದ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ. ಈ ದಿಕ್ಕಿನಲ್ಲಿ ವಿದ್ಯಾರ್ಥಿ ಸಮೂಹ ತಮ್ಮ ಇತಿಹಾಸ ಪ್ರಜ್ಞೆಯನ್ನು ಹೆಚ್ಚಿಸಿ ಕೊಂಡು ದೇಶದ ಪ್ರಜಾಪ್ರಭುತ್ವದ ಅಡಿಪಾಯನ್ನು ಗಟ್ಟಿಗೊಳಿಸಬೇಕು ಎಂದರು.
“ಇತಿಹಾಸ ಗೊತ್ತಿಲ್ಲದವನು ಭವಿಷ್ಯ ರೂಪಿಸಲಾರ ಎಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಹೇಳಿದ್ದರು.ಇಡೀ ದೇಶದ ಆಸ್ತಿಯನ್ನು ಮಾರಾಟ ಮಾಡುತ್ತಿರುವ ಬಿಜೆಪಿ ಮತ್ತು ಕೇಂದ್ರ ಸರ್ಕಾರಕ್ಕೆ ದೇಶ ನಿರ್ಮಾಣದ ಚರಿತ್ರೆಯೇ ಇಲ್ಲ.ಕಳೆದ 75 ವರ್ಷ ಗಳಿಂದ ಈ ದೇಶದ ಆಸ್ತಿಯನ್ನು ನಿರ್ಮಿಸಿದವರು.ಈ ದೇಶದ ಜನ.ಜವಾಹರಲಾಲ್ ನೆಹರೂ,ಲಾಲ್ ಬಹದ್ದೂರ್ ಶಾಸ್ತ್ರಿ,ಇಂದಿರಾ ಗಾಂಧಿ,ಪಿ.ವಿ.ನರಸಿಂಹ ರಾವ್,ರಾಜೀವ್ಗಾಂಧಿ,ಮನಮೋಹನ್ಸಿಂಗ್ ಅವಧಿಯಲ್ಲಿ ದೇಶದ ಜನ ನಿರ್ಮಿಸಿದ ದೇಶದ ಆಸ್ತಿಗಳನ್ನು ಬಿಜೆಪಿ ಮುಲಾಜಿಲ್ಲದೆ ಮಾರಾಟ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
ಈ ಬಿಜೆಪಿಯವರಿಗೆ ದೇಶದ ಆಸ್ತಿಯನ್ನು ನಿರ್ಮಿಸಿದ,ದೇಶ ಕಟ್ಟಿದ ಅನುಭವವಾಗಲೀ,ಚರಿತ್ರೆಯಾಗಲೀ ಇಲ್ಲ.ಹೀಗಾಗಿ ಈ ದೇಶದ ಬಗ್ಗೆ ಯಾವುದೇ ಭಾವನಾತ್ಮಕ ಸಂಬಂಧವೂ ಇಲ್ಲದಂತೆ ಇಡಿ ದೇಶದ ಆಸ್ತಿಯ ನ್ನು ಮಾರಾಟ ಮಾಡುತ್ತಿದ್ದಾರೆ.ದೇಶದ ಆಸ್ತಿ ಮಾರಾಟ ಮಾಡುವಾಗ ವಿದ್ಯಾರ್ಥಿ-ಯುವಜನರು ಇದನ್ನೆ ಲ್ಲಾ ತಿಳಿದುಕೊಳ್ಳದಂತೆ,ಪ್ರಶ್ನಿಸದಂತೆ ಮಾಡಲು ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ.ಹಿಂದೂ-ಮುಸ್ಲಿಂ ಪಾಕಿಸ್ತಾನ-ಚೀನಾ ವಿಚಾರಗಳಲ್ಲಿ ನಿಮ್ಮನ್ನು ಕಟ್ಟಿಹಾಕಿ ಬಿಜೆಪಿಯವರು ನಿಮ್ಮ ಭವಿಷ್ಯವನ್ನೂ ಮಾರಾಟ ಮಾಡುತ್ತಿದ್ದಾರೆ.ಪ್ರತೀ ದಿನ ನಿರಂತರ ಸುಳ್ಳುಗಳ ಮೂಲಕ ವಿದ್ಯಾರ್ಥಿ ಯುವಜನರ ಹಾದಿ ತಪ್ಪಿಸು ತ್ತಿದ್ದಾರೆ ಎಂದು ಅವರು ಕೇಂದ್ರದ ನೀತಿ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.
ಆದ್ದರಿಂದ ನೀವು ಹಾದಿ ತಪ್ಪಬಾರದು.ನಿಮಗೆ ಸತ್ಯ ಗೊತ್ತಾಗಬೇಕು ಎಂದರೆ ಶಿಕ್ಷಿತರಾಗಬೇಕು.ಈ ದೇಶದ ದಲಿತ-ಶೂದ್ರ ಸಮು ದಾಯವನ್ನು ಹಲವು ಶತಮಾನಗಳ ಕಾಲ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದ್ದು ಯಾರು ಎನ್ನುವುದನ್ನು ಯಾವತ್ತಾದರೂ ಪ್ರಶ್ನಿಸಿದ್ದೀರಾ ? ಈ ದೇಶದ ಮಹಿಳೆಯರನ್ನೂ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗಿತ್ತು.ಆದರೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಎಲ್ಲರಿಗೂ ಶಿಕ್ಷಣದ ಹಕ್ಕನ್ನು ನೀಡಿತು.ಇದರಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಕೇವಲ ಶೇ 18 ರಷ್ಟಿದ್ದ ಶಿಕ್ಷಿತ ಮಹಿಳೆಯರ ಪ್ರಮಾಣ ಈಗ ಶೇ 78 ಕ್ಕೆ ಏರಿಕೆಯಾಗಿದೆ ಎಂದು ಅವರು ತಿಳಿಸಿದರು.
ಶಿಕ್ಷಿತರ ಪ್ರಮಾಣ ಹೆಚ್ಚಾದಷ್ಟೂ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಬೇಕಿತ್ತು.ಆದರೆ ಶಿಕ್ಷಿತರೆ ಇಂದು ಜಾತಿ ವ್ಯವಸ್ಥೆಯ-ಕೋಮುವಾದದ ಪೋಷಿತರಾಗಿ ದೇಶವನ್ನು ಅಪಾಯಕ್ಕೆ ದೂಡುತ್ತಿರುವುದು ಆತಂಕಕಾರಿಯಾಗಿದೆ ಎಂದರು.
ಈ ದೇಶದ ಜಾತಿ ವ್ಯವಸ್ಥೆ ಸಮಾಜದಲ್ಲಿ ಯಾರನ್ನೂ ಒಗ್ಗಟ್ಟಾಗಿ,ನೆಮ್ಮದಿಯಾಗಿ ಬದುಕಲು ಬಿಡುವುದಿಲ್ಲ.ಜತೆಗೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಕೊಡುವುದಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸಮಸಮಾಜ ನಿರ್ಮಾಣದ ಆಶಯವನ್ನು,ಜಾತ್ಯತೀತತೆಯನ್ನು,ಸಮಾನತೆಯನ್ನು,ಸರ್ವಧರ್ಮ ಸಹೋಧರತ್ವವನ್ನು,ಪರಧರ್ಮ ಸಹಿಷ್ಣುತೆಯನ್ನು,ಸಾಮಾಜಿಕ ನ್ಯಾಯವನ್ನು ಸೇರಿಸಿದರು ಎಂದು ಅವರು ಇತಿಹಾಸವನ್ನು ಮೆಲಕು ಹಾಕಿದರು.
ಅಂಬೇಡ್ಕರ್ ಅವರ ಸಂವಿಧಾನವನ್ನು ನೆಹರೂ,ಇಂದಿರಾಗಾಂಧಿ ಸೇರಿ ಎಲ್ಲಾ ಕಾಂಗ್ರೆಸ್ ನಾಯಕರು ಒಪ್ಪಿಕೊಂಡರು.ಅಪ್ಪಿ ಕೊಂಡರು.ಹೀಗಾಗಿ ಸಮಸಮಾಜದ ವಿರೋಧಿಗಳಾದ,ಜಾತ್ಯತೀತತೆಯ ಶತ್ರುಗಳಾದ ಬಿಜೆಪಿಯವರು ಸಂವಿಧಾವನ್ನು ವಿರೋಧಿಸುತ್ತಿದ್ದಾರೆ.ಈ ಹುನ್ನಾರಗಳು ಇತಿಹಾಸದುದ್ದಕ್ಕೂ ನಡೆದುಕೊಂಡು ಬಂದಿದ್ದು ಇದನ್ನೆಲ್ಲಾ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು.ಕಳೆದ 75ವರ್ಷಗಳಲ್ಲಿ ದೇಶದಲ್ಲಿ ನಿರ್ಮಾಣ ಆಗಿರುವ ಆಸ್ತಿಗಳನ್ನು ಮಾರಾಟ ಮಾಡಲು ಅನುಕೂಲ ಆಗುವಂತೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುತ್ತಿದೆ.ರಾಜ್ಯಗಳ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ.ಶಿಕ್ಷಣ ಮತ್ತು ಕೃಷಿ ಸಂವಿಧಾನದ ಸಮವರ್ತಿ ಮತ್ತು ರಾಜ್ಯ ಪಟ್ಟಿಯಲ್ಲಿ ಬರುತ್ತವೆ ಎಂದು ಅವರು ವಿದ್ಯಾರ್ಥಿಗಳಿಗೆ ಪ್ರಸಕ್ತ ರಾಜಕೀಯ ಬೆಳವಣಿಗೆ ಬಗ್ಗೆ ಬೆಳಕು ಚೆಲ್ಲಿದರು.
ಆದರೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಹಕ್ಕುಗಳನ್ನು ಕಿತ್ತುಕೊಂಡು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ದೇಶಾದ್ಯಂತ ರೈತರ ಆಕ್ರೋಶಕ್ಕೆ ಕಾರಣವಾಗಿದೆ.ಹಾಗೆಯೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವಾಗಲೂ ರಾಜ್ಯಗಳ ಜತೆ ಚರ್ಚಿ ಸಿಲ್ಲ.ಪಾರ್ಲಿಮೆಂಟಿನಲ್ಲೂ ಚರ್ಚೆ ಆಗಿಲ್ಲ.ರಾಜ್ಯ ವಿಧಾನ ಸಭೆಯಲ್ಲೂ ಚರ್ಚೆ ಆಗಿಲ್ಲ.ಚರ್ಚೆಯೇ ಆಗದ ರಾಷ್ಟೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಜಾರಿ ಮಾಡುತ್ತಿದೆ.ಚರ್ಚೆ ಆದರೆ ವಿದ್ಯಾರ್ಥಿಗಳು ಈ ನೀತಿಯಲ್ಲಿರುವ ಹುಳುಕುಗಳನ್ನು,ತಮ್ಮ ಭವಿಷ್ಯಕ್ಕೆ ಮಾರಕ ಆಗಿರುವ ಸಂಗತಿಗಳನ್ನು ಪ್ರಶ್ನಿಸುತ್ತಾರೆ ಎನ್ನುವ ಕಾರಣಕ್ಕೆ ಚರ್ಚೆಯೆ ಇಲ್ಲದೆ ಜಾರಿ ಮಾಡಲಾ ಗುತ್ತಿದೆ.ಈ ಎಲ್ಲಾ ಹುನ್ನಾರ ಮತ್ತು ಸಂಚುಗಳನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಬಸವಣ್ಣನವರ “ಇವನಾರವ ಇವನಾರವ ವಚನದ ಸಾಲುಗಳನ್ನು ಹೇಳಿ ಕುವೆಂಪು ಅವರ ವಿಚಾರಶೀಲ ರಾಗಿ ಎನ್ನುವ ಸಂದೇಶವನ್ನು ವಿದ್ಯಾರ್ಥಿ ಸಮೂಹಕ್ಕೆ ನೀಡುವ ಮೂಲಕ ಜಾಗೃತರಾಗಲು ಅವರು ಕರೆ ನೀಡಿದರು.