ಟಿಡಿಆರ್ ಕಾಯ್ದೆಗೆ ತಿದ್ದುಪಡಿ,ತರಾತುರಿಯಲ್ಲಿ ಸುಗ್ರೀವಾಜ್ಞೆ ಜಾರಿ : ಭ್ರಷ್ಟಾಚಾರಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಮುನ್ನುಡಿ..?!

ವಿಶೇಷ ವರದಿ : ಕೃಪಾಕರ ಸಿದ್ದಾರ್ಥ

ಬೆಂಗಳೂರು : ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿಡಿಆರ್)ಪ್ರಕ್ರಿಯೆಯನ್ನು ಸರಳೀಕರಣಗೊಳಿಸ ಲು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಗೆ ತಿದ್ದಪಡಿ ಮೂಲಕ ಸುಗ್ರೀ ವಾಜ್ಞೆ ತರಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತು.ತಿದ್ದುಪಡಿ ಅಧ್ಯಾದೇಶದ ಮೂಲಕ ಅಕ್ರಮ ಟಿಡಿಆರ್ ಸಕ್ರಮಕ್ಕೆ ರಹದಾರಿ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ಯಡಿಯೂರಪ್ಪ ನೇತೃತ್ವದಲ್ಲಿ ಜುಲೈ 21ರಂದು ಸಚಿವ ಸಂಪುಟ ಸಭೆ ನಡೆಯಿತು.ಅಂದಿನ ಸಂಪುಟ ಸಭೆಯಲ್ಲಿ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಅಧ್ಯಾದೇಶ 2021ಕ್ಕೆ ಸಚಿವ ಸಂಪುಟ ಸಭೆ ಅನು ಮೋದನೆ ನೀಡಿತು.ಮಹತ್ವದ ಹಾಗೂ ವಿವಾದಾತ್ಮಕ ತೀರ್ಮಾನವನ್ನು ಇಂದಿನ ಮುಖ್ಯಮಂತ್ರಿ ಗಳು, ಅಂದಿನ ಕಾನೂನು ಮತ್ತು ಗೃಹ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಸಮರ್ಥಸಿ ಕೊಂಡು ತಿದ್ದುಪಡಿಗೆ ಅನುಮೋದನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.ಆ ಮೂಲಕ ಭ್ರಷ್ಟಾಚಾರಕ್ಕೆ ಮುನ್ನುಡಿ ಬರೆದಿದ್ದಾರೆಂಬ ಆರೋಪವಿದೆ.

ಆಗಸ್ಟ್ 12 ರಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ಅವರಿಂದ ಅಧ್ಯಾದೇಶಕ್ಕೆ ಒಪ್ಪಿಗೆ ಅಧಿಸೂಚನೆ ಜಾರಿ  
 

ಜುಲೈ 26ರಂದು ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.ಜುಲೈ 28 ರಂದು ನೂತನ  ಮುಖ್ಯಮಂತ್ರಿ ಯಾಗಿ ಬಸವರಾಜ್ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿ ದರು.ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ ತಿದ್ದುಪಡಿ ವಿಧೇಯಕಕ್ಕೆ ಆಗಸ್ಟ್ 12ರಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಹಿ ಹಾಕುವ ಮೂಲಕ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೊಳಿಸಲಾಗಿದೆ.  

ಸುಗ್ರೀವಾಜ್ಞೆಯನ್ನು ತರಾತುರಿಯಲ್ಲಿ ಅಧಿಸೂಚನೆ ಹೊರಡಿಸಿದರೂ ಸಾರ್ವಜನಿಕರಿಗೆ, ಶಾಸಕರಿಗೆ ಲಭ್ಯವಾಗದಂತೆ ರಹಸ್ಯವಾಗಿ ಕಾಯ್ದುಕೊಳ್ಳಲಾಗಿದೆ.ಅಧ್ಯಾದೇಶ ಜಾರಿಗೆ ಬಂದರೂ ಆಡಳಿತ ಪಕ್ಷ ಬಿಜೆಪಿ ಸೇರಿದಂತೆ ಕಾಂಗ್ರೆಸ್,ಜೆಡಿಎಸ್ ನಾಯಕರು ಯಾರೂ ಇದುವರೆಗೂ ಚಕಾರವೆತ್ತದಿರುವುದು ಅನುಮಾನಕ್ಕೆ ಕಾರಣವಾಗಿದೆ.ಬಹುತೇಕ ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ಟಿಡಿಆರ್ ತಿದ್ದುಪಡಿ ಕಾಯ್ದೆ ಲಾಭ ಪಡೆಯದುಕೊಳ್ಳುವ ಉದ್ದೇಶದಿಂದ ಬಾಯ್ಬಿಡುತ್ತಿ ಲ್ಲವೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.    

ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರ,ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಎಲ್ಲಾ ನಗರಾಭಿವೃದ್ದಿ ಪ್ರಾಧಿಕಾರಗಳು,ಸಾರ್ವಜನಿಕ ಪ್ರಾಧಿಕಾರ ಗಳು ನೂತನ ಸುಗ್ರೀ ವಾಜ್ಞೆಯ ವ್ಯಾಪ್ತಿಗೆ ಬರಲಿವೆ.ಆ ಮೂಲಕ ಅಕ್ರಮ ಮತ್ತು ಭ್ರಷ್ಟಾಚಾರವನ್ನು ರಾಜ್ಯ ವ್ಯಾಪಿ ವಿಸ್ತರಿಸಿದ ಕೀರ್ತಿಗೆ ಬಸವರಾಜ್ ಬೊಮ್ಮಾಯಿ ಸರ್ಕಾರ ಪಾತ್ರವಾಗಿದೆ.

ಅಧ್ಯಾದೇಶ ಜಾರಿಗೊಳಿಸಿದ ಸರ್ಕಾರ ತರಾತುರಿಯಲ್ಲಿ ಬಿಡಿಎ ವ್ಯಾಪ್ತಿಯಲ್ಲಿ ಬಾಕಿ ಉಳಿದಿದ್ದ 550 ಟಿಡಿಆರ್ ಪ್ರಕರಣಗಳಲ್ಲಿ 110ಕ್ಕೆ ಮಾತ್ರ ಅಭಿವೃದ್ದಿ ಹಕ್ಕು ಪ್ರಮಾಣ ಪತ್ರ(ಟಿಡಿಆರ್ ಸಿ) ಮತ್ತು ಅಭಿವೃದ್ಧಿ ಹಕ್ಕನ್ನು(ಟಿಡಿಆರ್) ನೀಡಲು ತೆರೆ ಮರೆಯಲ್ಲಿ ಕಸರತ್ತು ನಡೆಸಿದೆ.  

ಟಿಡಿಆರ್ ಕಾಯ್ದೆಗೆ ತಿದ್ದುಪಡಿಯಲ್ಲಿ ಏನಿದೆ : ’ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ  ಅಧಿನಿಯಮ 1961ರ (1963 ಕರ್ನಾಟಕ ಅಧಿನಿಯಮ-11)ಕ್ಕೆ ತಿದ್ದುಪಡಿ ಮಂಡಿಸಿ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದುಕೊಂಡಿದೆ.

ನೂತನ ಕಾಯ್ದೆಯನ್ನು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಎರಡನೆ ತಿದ್ದುಪಡಿ) ಅಧ್ಯಾದೇಶ,2021 ಆಗಸ್ಟ್ 12 ರಂದು ರಾಜ್ಯಪತ್ರ ದಲ್ಲಿ (ಗೆಜೆಟ್) ಪ್ರಕಟಿಸುವ ಮೂಲಕ ಅಧಿಸೂಚನೆಯು ರಾಜ್ಯದಲ್ಲಿ ಕಾಯ್ದೆ ಜಾರಿಗೆ ಬಂದಿದೆ.

ಈ ಅಧ್ಯಾದೇಶದಲ್ಲಿ 4 ಹೆಚ್ ಪ್ರಕರಣ ಬಳಿಕ ತಿದ್ದುಪಡಿ ಮೂಲಕ 2. 4-ಐ, 4-ಜೆ, 4-ಕೆ ಹೊಸ ಪ್ರಕರಣ ಗಳನ್ನು ಸೇರಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡತು.4-ಐ ನಲ್ಲಿ ಪಟ್ಟಣ ಮತ್ತು ಗ್ರಾಮಾಂತರ ಯೋನಾ ಅಧಿಕಾರ ಮತ್ತು ಸದಸ್ಯ ಕಾರ್ಯದರ್ಶಿಯನ್ನು ನೇಮಕಗೊಳಿಸಲು ಅವಕಾಶ ಕಲ್ಪಿಸಿದೆ.

4-ಜೆ ಪ್ರಕರಣ : ಅಡಿಯಲ್ಲಿ ಯೋಜನಾ ಪ್ರಾಧಿಕಾರ ಪ್ರಕಾರಗಳಿಗೆ ಅಧಿಕಾರ ನೀಡಲಾಗಿದೆ. ಅಂದರೆ ಭೂ ಬಳಕೆ,ಮಾಸ್ಟ್ ಪ್ಲಾನಿಂಗ್,ಯೋಜನಾ ಸ್ಕೀಂಗಳ ತಯಾರಿಕೆ,ಯೋಜನೆಯ ಚರ,ಸ್ಥಿರ ಆಸ್ತಿಗಳ ನಿರ್ವಹಣೆ, ಅರ್ಜಿಸಲು,ಧಾರಣ ಮತ್ತು ವಿಲೇ ಮಾಡಲು ಕಾಯ್ದೆಯಲ್ಲಿಅವಕಾಶ ನೀಡಿದೆ.

4-ಕೆ ಪ್ರಕರಣ : ಅಡಿಯಲ್ಲಿ ಸ್ಥಳೀಯ ಯೋಜನಾ ಪ್ರಾಧಿಕಾರವನ್ನು ಹೊರತುಪಡಿಸಿದ ಭೂ ಪ್ರದೇಶದಲ್ಲಿ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗಿದೆ.

ಅಧ್ಯಾದೇಶದಲ್ಲಿ ಅಭಿವೃದ್ದಿ ಹಕ್ಕು ಪ್ರಮಾಣ ಪತ್ರ (ಟಿಡಿಆರ್ ಸಿ)ಹಂಚಿಕೆ ಮತ್ತು ಟಿಡಿಆರ್ ನ್ನು ವರ್ಗಾವಣೆ ಮಾಡುವುದು, ಯೋಜನಾ ಪ್ರದೇಶ ಹೊರತುಪಡಿಸಿ ಟಿಡಿಆರ್ ಬಳಕೆ,ಸ್ಟಾಕಿಂ ಗ್,ಬ್ಯಾಂಕಿಂಗ್ ಸೇರ್ಪಡೆಗೊಳಿಸಲಾಗಿದೆ.ವ್ಯವಹಾರ ನಡೆ ಸಲು,ಮಾರುಕಟ್ಟೆ ಮೌಲ್ಯಕ್ಕೆ ಸಮ ನಾಗಿರುವುದನ್ನು ಕಾಯ್ದೆಯಿಂದ ಕೈಬಿಟ್ಟು ಭಾರೀ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಟ್ಟಿದ್ದಾರೆ.

ಅಂತೆಯೇ ಭೂ ಮಾಲೀಕನಿಗೆ ಡಿಆರ್ ಸಿ(ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರ)ಯನ್ನು  ಕಾಮಗಾರಿ ನಡೆಸಿದ ಏಜೆನ್ಸಿಯು(ಬಿಬಿಎಂಪಿ,ಬಿಡಿಎ)ಮಾಲೀಕನಿಗೆ ವಿತರಿಸುತ್ತದೆ.

ಯಾರೇ ಅಭಿವೃದ್ದಿ ಹಕ್ಕುನ್ನು ಟಿಡಿಆರ್ ಗಾಗಿಯೂ ಸಹ ಪ್ರಮಾಣ ಪತ್ರವನ್ನು ಮತ್ತೊಬ್ಬನಿಗೂ ಮಾರಾಟ ಮಾಡಲು ತಿದ್ದುಪಡಿ ಅವಕಾಶ ಕಲ್ಪಿಸಿದೆ. ಇದು ಮಾಲೀಕ ಸ್ವಂತಕ್ಕ ಬಳಸಿಕೊಳ್ಳಬ ಹುದು.ಮಾಲೀಕ ಬಳಸಿಕೊಳ್ಳದಿದ್ದರೆ ಮತ್ತೊಬ್ಬನಿಗೆ ಮಾರಾಟ ವರ್ಗಾಯಿಸಬಹುಸಬಹುದು ಮತ್ತು ಮಾರಾಟ ಮಾಡಲು ಅವಕಾಶ ನೀಡಿರುವುದು ನೂರಾರು ಕೋಟಿ ಅಕ್ರಮಗಳಿಗೆ ನೇರ ಮಾರ್ಗ ರೂಪಿಸಿದ್ದಾರೆ.

More News

You cannot copy content of this page