ಕೆಪಿಸಿಸಿ ಕಚೇರಿಯಲ್ಲಿ ನಾಳೆ ಸಾರ್ವಜನಿಕ ದರ್ಶನಕ್ಕೆ ಅಸ್ಕರ್ ಪಾರ್ಥೀವ ಶರೀರ, ರಾಹುಲ್ ಗಾಂಧಿ ಭಾಗಿ

ಬೆಂಗಳೂರು : ಸೋಮವಾರ ವಿಧಿವಶರಾಗಿದ್ದ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಕೇಂದ್ರದ ಮಂತ್ರಿ ಅಸ್ಕರ್ ಫೆರ್ನಾಂಡೀಸ್ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ಇಂದು ಸಂಜೆ ತರಲಾಯಿತು.

ನಾಳೆ ಬೆಳಗ್ಗೆ ಹತ್ತು ಗಂಟೆಯಿಂದ  12 ಗಂಟೆಯವರೆಗೆ  ಕೆಪಿಸಿಸಿ ಕಚೇರಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ನಂತರ ಅಶೋಕ್ ನಗರದಲ್ಲಿರುವ ಸೇಂಟ್  ಪ್ಯಾಟ್ರಿಕ್ ಚರ್ಚ್ ನಲ್ಲಿ ಅಂತಿಮ ವಿಧಿ ವಿಧಾನದ ಮೂಲಕ ಅಂತ್ಯಕ್ರಿಯೆ ನಡೆಯಲಿದೆ.

ಚರ್ಚ್ ನಲ್ಲಿ ಮೃತರ ಆತ್ಮದ ಶಾಂತಿಗಾಗಿ  ಪೂಜೆ, ಪ್ರಾರ್ಥನೆ ನಡೆಯಲಿದೆ.  ಕುಟುಂಬ ಸದಸ್ಯರು,  ಎಐಸಿಸಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ, ಕೇಂದ್ರದ ನಾಯಕರು, ಸಂಸದರು, ಹೊರ ರಾಜ್ಯದ ಸಚಿವರು, ಶಾಸಕರು ಅಂತಿಮ ದರ್ಶನ ಪಡೆಯಲಿದ್ದಾರೆ.

ಸುಮಾರು ಎರಡು ತಿಂಗಳ ಹಿಂದೆ ಯೋಗ ಮಾಡುತ್ತಿರುವಾಗ ಬಿದ್ದು ತಲೆಗೆ ಪೆಟ್ಟು ಬಿದ್ದಿತ್ತು. ನಂತರ ಅವರು ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 80 ವರ್ಷದ ಅಸ್ಕರ್ ಸೋಮವಾರ ವಿಧಿವಶರಾಗಿದ್ದರು.

More News

You cannot copy content of this page