ನಮ್ಮದು ದೇಶಭಕ್ತಿ –ಕಾಂಗ್ರೆಸ್ ನದ್ದು ಗುಲಾಮಗಿರಿ : ಸಿಎಂ ಆಕ್ರೋಶ

ಹುಬ್ಬಳ್ಳಿ: ನಮ್ಮದು ದೇಶಭಕ್ತಿಯ ಪಕ್ಷ, ಕಾಂಗ್ರೆಸ್ ಗುಲಾಮಗಿರಿಯ ಪಕ್ಷ, ದೇಶಭಕ್ತಿಯೂ ಕೂಡ ಅವರಿಗೆ ಅದೇ ರೀತಿಯಲ್ಲಿ ಕಾಣುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಿಡಿ ಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣಾ ಭಾಗದ ವಿದ್ಯಾರ್ಥಿಗಳಿಗೂ ಸಮಾನ ಶಿಕ್ಷಣ ಸಿಗಲಿ ಎನ್ನುವ ಉದ್ದೇಶದಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗುತ್ತಿದೆ. ಇಲ್ಲಿಯೂ ಕೂಡ ಅವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಟಿಕೀಸಿದ್ದಾರೆ.
ಬಂದ್ ಬೇಡ ಸಿಎಂ ಮನವಿ
ಕೋವಿಡ್ ನಿಂದ ಜನರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಅವರು ಈಗ ಮನೆಯಿಂದ ಹೊರ ಬರುತ್ತಿದ್ದಾರೆ, ವ್ಯಾಪಾರ ವಹಿವಾಟಿನಲ್ಲಿ ತೊಡಗುತ್ತಿದ್ದಾರೆ, ಮತ್ತೆ ಬಂದ್ ನಿಂದ ಜನಸಾಮಾನ್ಯರಿಗೆ ತೊಂದರೆಯಾಗಬಾರದು ತಮ್ಮ ಹೋರಾಟವನ್ನು ಕೈಬಿಡಿ ಎಂದು ಹೋರಾಟಗಾರರಿಗೆ ಮುಖ್ಯಮಂತ್ರಿ ಅವರು ಮನವಿ ಮಾಡಿದರು.
ಹತಾಶರಾಗಿರುವ ಸಿದ್ದರಾಮಯ್ಯ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣವಾಗಿ ಹತಾಶಾರಾಗಿದ್ದಾರೆ. ಅವರೊಬ್ಬ ಮಾಜಿ ಮುಖ್ಯಮಂತ್ರಿಗಳು ಅನ್ನೋದನ್ನು ಮರೆತಿದ್ದಾರೆ. ಅವರು ಮಾತನಾಡುವ ರೀತಿ ಈ ಅವರು ನಿರ್ವಹಿಸಿರುವ ಜವಾಬ್ದಾರಿಗೆ ತಕ್ಕುದ್ದಾಗಿಲ್ಲ ಎಂದು ಸಿದ್ದರಾಮಯ್ಯ ಅವರ ವಿರುದ್ಧ ಹರಿಹಾಯ್ದರು.

More News

You cannot copy content of this page