ಬೆಂಗಳೂರು : ಅಂತಾರಾಷ್ಟ್ರೀಯ ನಗರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು. ರೌಡಿಗಳನ್ನೂ ಮಟ್ಟ ಹಾಕಬೇಕು,ಹಾಗೂ ಸುಳ್ಳು ದಾಖಲೆ ಪತ್ರ ತಯಾರಿಸಿ,ಸರಕಾರಿ ಹಾಗೂ ನಾಗರಿಕರ ಭೂಮಿ ಮತ್ತು ನಿವೇಶನ ಗಳನ್ನು ಕಬಳಿಸುವವರ ವಿರುದ್ಧ ನಿಷ್ಠುರವಾಗಿ ಕ್ರಮ ಜರುಗಿಸಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸರಿಗೆ ಖಡಕ್ ಸೂಚನೆ ನೀಡಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತ ವ್ಯಾಪ್ತಿಯ,ಪ್ರಗತಿ ಪರೀಶೀಲನಾ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಅಶಾಂತಿಗೆ ಕಾರಣವಾಗುವ ಎಲ್ಲ ಅಕ್ರಮ ಕ್ಲಬ್,ಕ್ಯಾಸಿನೋಗಳೂ ಹಾಗೂ ಇನ್ನಿತರ ಕಾನೂನುಬಾಹಿರವಾಗಿ ನಡೆಯು ವ ಎಲ್ಲ ರೀತಿಯ ಅಕ್ರಮಗಳನ್ನು ತಡೆಯಬೇಕು.ನಾಗರೀಕರ,ಅದರಲ್ಲಿಯೂ ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಗೆ ಕ್ರಮ ತೆಗೆದು ಕೊಳ್ಳಬೇಕು ಎಂದು ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ನಾಗರಿಕರ ರಕ್ಷಣೆಗೆ ಹತ್ತು ಹಲವು ಕಾನೂನುಗಳಿದ್ದು ಅವುಗಳಿಗೆ ಮಾನ್ಯತೆ ಬರಬೇಕಾದರೆ,ಪೊಲೀಸರು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.ಹಾಗಾದರೆ ಮಾತ್ರ ಸಾರ್ವಜನಿಕರಿಗೆ ಪೊಲೀಸ್ ವ್ಯವಸ್ಥೆ ಬಗ್ಗೆವಿಶ್ವಾಸ ಮೂಡುತ್ತದೆ ಎಂದು ಹೇಳಿದರು.
ಅಕ್ರಮ ಕ್ಲಬ್ ಮತ್ತು ಕ್ಯಾಸಿನೋಗಳು ನಗರದಲ್ಲಿ ನಡೆಯುತ್ತಿರುವ ಬಗ್ಗೆ ವರದಿಗಳಿವೆ.ಅವುಗಳನ್ನು ನಿರ್ದಾಕ್ಷಿಣ್ಯವಾಗಿ ನಿಲ್ಲಿಸ ಬೇಕು ಹಾಗೂ ಇದಕ್ಕಾಗಿ ವಿಶೇಷ ಕಾರ್ಯಪಡೆ ರಚಿಸಿ ಕ್ರಮ ತೆಗೆದುಕೊಳ್ಳಬೇಕು ಎಂದರು.
ಪ್ರೆಶ್ನೆಯೊಂದಕ್ಕೆ ಉತ್ತರಿಸಿದ ಅವರು,ಅಲ್ಲಲ್ಲಿ,ಪೊಲೀಸರು, ನೆಲಗಳ್ಳರ ಜೊತೆಗೆ ಶಾಮೀಲಾಗಿ ಮುಗ್ಧ ಜನರನ್ನು ವಂಚಿಸುವುದರ ಬಗ್ಗೆ ದೂರುಗಳಿದ್ದು,ಅಂಥಹ ಅಧಿಕಾರಿಗಳನ್ನು ಗುರುತಿಸಿ,ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಹಿರಿಯ ಪೊಲೀಸ್ ಅಧಿ ಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಸೂಚಿಸಿದರು.

ನಗರದಲ್ಲಿ ಮಾದಕ ವಸ್ತುಗಳ,ಕಳ್ಳ ಸಾಗಣೆ,ವಿತರಣೆ ಹಾಗೂ ಬಳಕೆ ವಿರುದ್ಧ,ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಹಿರಿಯ ಪೊಲೀ ಸರಿಗೆ ತಾಕೀತು ಮಾಡಲಾಗಿದ್ದು,”ಮಾದಕ ವಸ್ತುಗಳ ಜಾಲವನ್ನು ಮೂಲೋ ತ್ಪಾಟನೆ ಮಾಡಲು ಸಾಧ್ಯವಾದ ಎಲ್ಲ ಕ್ರಮಗಳ ನ್ನು ಜರುಗಿಸಲಾಗುವುದು.ನಗರದಲ್ಲಿ, ಅಕ್ರಮವಾಗಿ ನೆಲಸಿರುವ ಹಾಗೂ ವೀಸಾ ಅವಧಿ ಮುಗಿದಿರುವ ವಿದೇಶಿ ನಾಗರಿಕರನ್ನು ಪ್ರತಿಯೊಂದು ಠಾಣೆ ವ್ಯಾಪ್ತಿ ಯಲ್ಲಿ ಗುರುತಿಸುವ ಹಾಗೂ ಅವಧಿ ಮುಗಿದಿದ್ದರೂ ವಾಸಿಸುತ್ತಿರುವ ವಿದೇಶಿಗರನ್ನು ಹೊರ ಹಾಕುವ ಅಗತ್ಯತೆ ಬಗ್ಗೆ ತಿಳಿ ಹೇಳಿದ್ದೇನೆ.ಅಕ್ರಮ ವಿದೇಶಿ ನಾಗರಿಕರ ಮೇಲೆ ಸತತವಾಗಿ ನಿಗಾ ಇಡುವಂತೆ ತಿಳಿಸಿದ್ದೇನೆ ಎಂದು ಅವರು ನುಡಿದರು.
ವಿದೇಶಿ ನಾಗರಿಕರಿಗೆ,ಸ್ಥಳೀಯ ವ್ಯಕ್ತಿಗಳು ಹಾಗೂ ಕೆಲವು ಸರಕಾರಿ ಅಧಿಕಾರಿಗಳು,ಆಧಾರ್ ಮತ್ತು ಪಡಿತರ ಚೀಟಿಗಳನ್ನು ಅಕ್ರಮ ವಾಗಿ ಪಡೆದುಕೊಳ್ಳಲು ನೆರವಾಗಿರುವ ಬಗ್ಗೆ ವರದಿಗಳಿದ್ದು,ಅಂತಹ ಸರಕಾರಿ ನೌಕರರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದು ಕೊಳ್ಳುವಂತೆಯೂ ನಿರ್ದೇಶಿಸಿದ್ದೇನೆ.
ಇದಕ್ಕೂ ಮೊದಲು ಸಚಿವರು ಆನ್ಲೈನ್ ಶಸ್ತಾಸ್ತ್ರ ಪರವಾನಗಿ ಆಪ್ ಗೆ ಚಾಲನೆ ನೀಡಿದರು.ಇನ್ನು ಮುಂದೆ ನಗರದಲ್ಲಿ ನೋಂದಾ ಯಿಸಿರುವ ಶಸ್ತ್ರಾಸ್ತ್ರ ಪರವಾನಗಿ ಹೊಂದಿದ ನಾಗರಿಕರು.ಆನ್ಲೈನ್ ಮೂಲಕವೇ ನವೀಕರಣ ಹಾಗೂ ವಾರ್ಷಿಕ ಶುಲ್ಕವನ್ನು ಕಟ್ಟ ಬಹುದು.ಇದಕ್ಕಾಗಿ ಪೊಲೀಸ್ ಕಚೇರಿಗೆ ಭೇಟಿ ನೀಡುವ ಅಗತ್ಯ ಬೀಳುವುದಿಲ್ಲ.ನಗರದಲ್ಲಿ ಸುಮಾರು ೮೦೦೦ ಪರಾವನಾಗಿ ದಾರರು ಈ ಪ್ರಯೋಜನ ಪಡೆಯಲಿದ್ದಾರೆ ಎಂದರು.