ಬ್ಲಾಕ್ ಕ್ಯಾಟ್ ಕಮಾಂಡೋಗಳ ಕಾರ್ ಪಥಸಂಚಲನೆ

ಬೆಂಗಳೂರು : ನಗರದ ರಾಷ್ಟ್ರೀಯ ಮಿಲಿಟರಿ ಸ್ಮಾರಕ, ಇಂದಿರಾ ಗಾಂಧಿ ಸಂಗೀತ ಕಾರಂಜಿ ಸಮೀಪ, ಜವಹರಲಾಲ್ ನೆಹರೂ ತಾರಾಲಯದ ಎದುರು, ಇಲ್ಲಿ ಸುದರ್ಶನ ಭಾರತ್ ಪರಿಕ್ರಮ, ಬ್ಲಾಕ್ ಕ್ಯಾಟ್ ಕಾರ್ ರಾಲಿಗೆ ಕಂದಾಯ ಸಚಿವ ಆರ್. ಅಶೋಕ್ ಅವರು ಚಾಲನೆ ನೀಡಿದರು.


ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ ನ ಮಹಾನಿರ್ದೇಶಕ ಎಂ. ಎ. ಗಣಪತಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಹುತಾತ್ಮ ಸಂದೀಪ್ ಉನ್ನಿಕೃಷ್ಣನ್ ಅವರ ತಂದೆ-ತಾಯಿಯವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

More News

You cannot copy content of this page