ಬೆಂಗಳೂರು : 2025-26 ಸಾಲಿನ ಬಜೆಟ್ ನ್ನು ಮಾ.7ಕ್ಕೆ ಮಂಡನೆ ಮಾಡಲಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ವಿಧಾನಮಂಡಲ ಜಂಟಿ ಅಧಿವೇಶನ ಮಾ.3ನೇ ತಾರೀಖಿನಿಂದ ಬಜೆಟ್ ಶುರುವಾಗುತ್ತದೆ.ಹೊಸ ವರ್ಷದ ಮೊದಲನೇ ಅಧಿವೇಶನ ಆಗಿರೋದ್ರಿಂದ ಮಾ.3ರಂದು ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಅದರ ಮೇಲೆ ಚರ್ಚೆ ಆಗುತ್ತದೆ.2025-26ನೇ ಸಾಲಿನ ಬಜೆಟ್ ಮಾ.7 ರಂದು ಶುಕ್ರವಾರ ಮಂಡಿಸುತ್ತೇವೆ.ಎಷ್ಟು ದಿನ ನಡೆಸಬೇಕು ಎಂಬುದನ್ನು ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸ್ತೇವೆ ಎಂದು ಹೇಳಿದ್ರು.
ಕಳೆದ ಅನೇಕ ದಿನದಿಂದ ಬೇರೆ ಬೇರೆ ಇಲಾಖೆ ಜೊತೆ ಸಭೆ ಮಾಡಿದ್ದೇನೆ.ನನಗೆ ಅನಾರೋಗ್ಯ ಕಾರಣ ಇದ್ದರೂ ಸಭೆ ಮಾಡಿದ್ದೇನೆ. ಇವತ್ತು ಕೂಡ ಸಭೆ ಮಾಡಿದ್ದೇನೆ.ರೈತ ಮುಖಂಡರು ತಮ್ಮ ಅಭಿವೃದ್ಧಿ ಮುಂದಿಟ್ಟಿದ್ದಾರೆ. ಕರ್ನಾಟಕ ಸರ್ಕಾರ ಯಾವಾಗಲೂ ರೈತರ ಹಿತ ಕಾಪಾಡಲು ಹಿಂದೆ ಬಿದ್ದಿಲ್ಲ. ಯಾವತ್ತೂ ಕೂಡ ರೈತರ ಜೊತೆ ಇರುತ್ತೇವೆ. ಕೃಷಿಕರ ಜೊತೆ ಇರುತ್ತೇವೆ ಎಂಬ ಮಾತು ಕೊಡುತ್ತೇವೆ ಎಂದರು.
ಬೆಲೆ ಏರಿಕೆ ಜಾಸ್ತಿ ಆಗ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ,ಬೆಲೆ ಏರಿಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಧಾರ.ರಾಜ್ಯ ಸರ್ಕಾರದಿಂದ ಬೆಲೆ ಇಳಿಕೆಗೆ ಏನೆಲ್ಲಾ ಮಾಡಬೇಕು ಅದನ್ನು ಮಾಡುತ್ತೇವೆ, ಅವರೂ ಮಾಡಬೇಕು ಎಂದು ತಿಳಿಸಿದರು.
ಜನಜೀವನ ಮಿಷಿನ್ ಯೋಜನೆ ಕುರಿತು ವಾಗ್ವಾದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ,ಚರ್ಚೆ ಎಲ್ಲಾ ಮಾಡಿದ್ದೇನೆ.ನಮ್ಮ ವೇಗಕ್ಕೆ ಅನುಗುಣವಾಗಿ ಅವರು ಮಾಡುತ್ತಿಲ್ಲ. ಕೇಂದ್ರದ ಪಾಲನ್ನು ಅವರು ಕೊಡುತ್ತಿಲ್ಲ.ಹಾಗಾಗಿ ನಾವು ಅದನ್ನ ಟ್ವೀಟ್ ಮಾಡಿದ್ದೇವೆ. ಮೆಟ್ರೋ ರೈಲಿನ ದರ ನಿಗದಿ ಮಾಡಲು ಕೇಂದ್ರ ಸರ್ಕಾರ ಕಮಿಟಿ ಮಾಡಿದ್ದಾರೆ. ಅದರಲ್ಲಿ ಇಬ್ಬರು ಕೇಂದ್ರದ ಅಧಿಕಾರಿಗಳು ಇರ್ತಾರೆ, ಒಬ್ಬರು ರಾಜ್ಯ ಸರ್ಕಾರದವರು ಇರ್ತಾರೆ. ಅದು ಅಟಾನಮಸ್ ಬಾಡಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ಮಾಡಿರೋದು. ಬೆಲೆ ನಿಗದಿ ಮಾಡಲು ನಾವು ಪ್ರಪ್ರೊಸಲ್ ಕೊಡುತ್ತೇವೆ. ಆದ್ರೆ ಬೆಲೆ ನಿಗದಿ ಮಾಡೋದು ಕಮಿಟಿಯವರು ಎಂದರು.
ಅನ್ನಭಾಗ್ಯ ಗೃಹಲಕ್ಷ್ಮೀ ಹಣ ಬಿಡುಗಡೆ ಆಗಿಲ್ಲ ಎಂಬ ಆರೋಪ ವಿಚಾರವಾಗಿ ಮಾತನಾಡಿ, ಆಗಿಲ್ಲ ಅಂತ ಯಾರು ಹೇಳಿದ್ದು?. ನೋಡಪ್ಪ, ಯಾವುದನ್ನು ಕೂಡ ನಿಲ್ಲಿಸೋ ಪ್ರಶ್ನೆ ಇಲ್ಲ. ಇಲ್ಲಿಯವರೆಗೆ ಮಾಡಿದ್ದೇವೆ. ಅಂದ್ರೆ ಮುಂದೆಯೂ ಮಾಡುತ್ತೇವೆ. ಮೂರು ತಿಂಗಳಿಂದ ಪೆಂಡಿಂಗ್ ಇರೋದು ನನಗೆ ಗೊತ್ತಿಲ್ಲ, ಕೂಡ್ಲೇ ಬಿಡುಗಡೆ ಮಾಡುತ್ತೇವೆ ಎಂದರು.
ಅನಾರೋಗ್ಯ ವಿಚಾರವಾಗಿ ಪ್ರತಿಕ್ರಿಯಿಸುತ್ತಾ,ಆರೋಗ್ಯ ಸುಧಾರಣೆ ಆಗ್ತಿದೆ, ನೋವು ಕಡಿಮೆ ಆಗ್ತಿದೆ. ಒತ್ತಡ ಆಗಿರೋದ್ರಿಂದ ನೋವಿದೆ ಎಂದರು.
ನಾಯಕತ್ವ ಬದಲಾವಣೆ ಹೇಳಿಕೆಗಳು ವಿಚಾರವಾಗಿ ಮಾತನಾಡಿ, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದರು.