CONGRESS QUESTIONS: ನಿಮಗೆ ಸಂತೋಷ್ ಪಾಟೀಲ್‌ರಂತೆ ಇನ್ನೆಷ್ಟು ಬಲಿ ಬೇಕು? 40% ಸರ್ಕಾರದ #BJPBrashtotsava ನಿಲ್ಲುವುದು ಯಾವಾಗ? : ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು : ಬೆಂಗಳೂರು ನಗರದಲ್ಲಿ ಕಮಿಷನ್ ಶೇಕಡಾ 40% ರಿಂದ ಶೇಕಡಾ 50%ಕ್ಕೇರಿಕೆಯಾಗಿದೆ, ಹಾಗೆಯೇ ಬಾಕಿ ಉಳಿದಿರುವ ಹಣವನ್ನು ಕೂಡಲೇ ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕೆಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಗುತ್ತಿಗೆದಾರರ ಸಂಘ ಆಗ್ರಹಿಸಿತ್ತು.
ಈ ಹೇಳಿಕೆ ವಿರುದ್ಧ ರಾಜ್ಯ ಕಾಂಗ್ರೆಸ್ ಆಡಳಿತರೂಢ ಬಿಜೆಪಿ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಟ್ವೀಟರ್ ನಲ್ಲಿ ಟ್ವೀಟ್ ಮಾಡಿ ರಾಜ್ಯ ಸರ್ಕಾರಕ್ಕೆ ಇನ್ನೆಷ್ಟು ಬಲಿಗಳು ಬೇಕು ಎಂದು ಪ್ರಶ್ನಿಸಿದೆ.
ಕಮಿಷನ್ ಕಾಟದಿಂದ ಬೇಸತ್ತು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಗುತ್ತಿಗೆದಾರರ ಸಂಘ ಸಿಎಂಗೆ ಪತ್ರ ಬರೆದಿದೆ.

ಕಮಿಷನ್ ಸರ್ಕಾರದ ಮುಖ್ಯಮಂತ್ರಿ @BSBommai ಅವರೇ, ನಿಮಗೆ ಸಂತೋಷ್ ಪಾಟೀಲ್‌ರಂತೆ ಇನ್ನೆಷ್ಟು ಬಲಿ ಬೇಕು? 40% ಸರ್ಕಾರದ #BJPBrashtotsava ನಿಲ್ಲುವುದು ಯಾವಾಗ? ಎಂದು ಪ್ರಶ್ನಿಸಿದೆ.

More News