ದುಬೈನ ಶಾರ್ಜಾದಲ್ಲಿ ನಡೆದ ರಾಜ್ ಕಪ್ ಸೀಸನ್ -5 ಕಲರ್ ಫುಲ್ ಆಗಿ ಮುಕ್ತಾಯವಾಗಿದೆ. ಈ ಬಾರಿಯ ರಾಜ್ ಕಪ್ ರಿಯಲ್ ಸ್ಟಾರ್ ಉಪೇಂದ್ರ ನಾಯಕತ್ವದ ಸಮೃದ್ಧಿ ತಂಡದ ಪಾಲಾಗಿದೆ. ಸೆಮಿಪೈನಲ್ ಹಾಗೂ ಫೈನಲ್ ನಲ್ಲಿ ರೋಚಕವಾಗಿ ಆಡಿದ ರಿಯಲ್ ಸ್ಟಾರ್ ತಂಡ ರಾಜ್ ಕಪ್ ಗೆದ್ದುಕೊಂಡಿದೆ.
ಅಪ್ಪು ನೆನಪಲ್ಲಿ ರಾಜ್ ಕಪ್ ಈ ಬಾರಿ ದುಬೈನಲ್ಲಿ ನಡೆದಿದೆ. ಐತಿಹಾಸಿಕ ಶಾರ್ಜಾ ಮೈದಾನದಲ್ಲಿ ನಡೆದ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಕನ್ನಡ ಚಿತ್ರರಂಗದ ಕಲಾವಿದರು, ನಿರ್ಮಾಪಕರು, ನಿರ್ದೇಶಕರು, ತಾಂತ್ರಿಕ ವರ್ಗದವರೂ ಎಲ್ಲರೂ ಭಾಗಿಯಾಗಿ ರಾಜ್ ಕಪ್ ರಂಗು ಹೆಚ್ಚಿಸಿದ್ದಾರೆ.

ಕ್ರಿಕೆಟ್ ಟೂರ್ನಮೆಂಟ್ ಬಳಿಕ ದುಬೈ ಪ್ರಮುಖ ಸ್ಥಳಗಳಿಗೆ ನಟ ನಟಿಯರೆಲ್ಲ ಭೇಟಿ ನೀಡಿ ಎಂಜಾಯ್ ಮಾಡಿದ್ದಾರೆ. ಅದರ ಕೆಲ ಫೋಟೋಗಳು ಇಲ್ಲಿವೆ.









