ಬೆಂಗಳೂರು: ಜ.11 : ಸ್ಯಾಂಟ್ರೋ ರವಿ ಅಕ್ರಮ ಕುರಿತು ಉನ್ನತ ಮಟ್ಟದ ತನಿಖೆಗೆ ನಡೆಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಕಾಂಗ್ರೆಸ್ ಮುಖಂಡ ದೂರು ನೀಡಿದರು. ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ಮಾಡಿ ದೂರು ಸಲ್ಲಿಸಿದರು.

ಸದ್ಯ ತಲೆಮರೆಸಿಕೊಂಡಿರುವ ಸ್ಯಾಂಟ್ರೋ ರವಿಯ ಹುಡುಕಾಟದಲ್ಲಿ ಪೊಲೀಸರು. ಸ್ಯಾಂಟ್ರೋರವಿ ವಿರುದ್ಧವಾಗಿರುವ ಪ್ರಮುಖ ಆರೋಪ ಭ್ರಷ್ಟಾಚಾರ, ಪೊಲೀಸ್ ಅಧಿಕಾರ ವರ್ಗಾವಣೆ ಅನೈತಿಕ ವ್ಯವಹಾರ ವೇಶ್ಯವಾಟಿಕೆ ದಂಧೆ ಸರ್ಕಾರ ಬಂಗಲೆ ದುರ್ಬಳಕೆ ಮಾಡಿದ್ದಾನೆ ಎಂದು ಕಾಂಗ್ರೆಸ್ ಮುಖಂಡರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.




