ಮೈಸೂರು; ಜ.27: ಕಳೆದ ಬಾರಿ ಜನಪರ ಬಜೆಟ್ ನೀಡಿದಂತೆ ಈ ಬಾರಿಯೂ ಜನಪರ ಆಯವ್ಯಯ ನೀಡಲಾಗುವುದು. ಇಡೀ ಕರ್ನಾಟಕವೇ ಬಜೆಟ್ ನಿರೀಕ್ಷೆ ಮಾಡಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು,
ಚಿರತೆ ಹಾವಳಿ ನಿಯಂತ್ರಣಕ್ಕೆ ಬೆಂಬಲ
ರಾಜ್ಯಾದ್ಯಂತ ಟಾಸ್ಕ್ ಫೋರ್ಸ್ ಇದ್ದು, ಸದಾ ಕಾಲ ಕಾರ್ಯನಿರವಹಿಸುತ್ತದೆ. ಚಿರತೆ ದಾಳಿ ಹೆಚ್ಚಾದ್ದರಿಂದ ನಾನೇ ಸಭೆ ನಡೆಸಿ, ಆನೆಗಳ ವಿಚಾರಕ್ಕೆ ಶಾಶ್ವತ ಟಾಸ್ಕ್ ಫೋರ್ಸ್ ರಚಿಸಿ, ಅಗತ್ಯ ಪರಿಕರಗಳನ್ನು ಒದಗಿಸಲಾಗಿದೆ. ಚಿರತೆ ಹಿಡಿಯಲೂ ಕೂಡ ಅಗತ್ಯ ಮಾನವ ಸಂಪನ್ಮೂಲ, ಪರಿಕರ, ವಾಹನ ನೀಡಲಾಗುವುದು. ಈಗಾಗಲೇ ಅರಣ್ಯ ಅಧಿಕಾರಿಗಳ ಸಭೆ ಕರೆದು ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆಯಬೇಕು. ಗ್ರಾಮಸ್ಥರನ್ನೊಳಗೊಂಡ ತಂಡ ರಚಿಸಿ ಅವರಿಗೆ ತರಬೇತಿ ನೀಡುವುದು, ಗಸ್ತು ತಿರುಗುವುದು ಮಾಡಬೇಕು. ಅರಣ್ಯದ ಅಂಚಿನಲ್ಲಿರುವವರಿಗೆ ವಿಶ್ವಾಸ, ಸ್ಥೈರ್ಯ ನೀಡುವ ಕೆಲಸವಾಗಬೇಕು. ಈ ಪ್ರಾಣಿಗಳ ಚಲನವಲನ, ನಡವಳಿಕೆ, ಗುಂಪಿನಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವ ಮಾಹಿತಿ ಗ್ರಾಮದವರಿಗೆ ನೀಡಿದರೆ ಅನುಕೂಲವಾಗುತ್ತದೆ. ಸಂಜೆ ಮೇಲೆ ಹೊರಗೆ ಹೋಗದಂತೆ ಲಿಖಿತ ಮಾಹಿತಿ ನೀಡಬೇಕು. ಚಿರತೆ ಹಾವಳಿಯನ್ನು ನಿಯಂತ್ರಣ ಮಾಡಲು ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡಲಿದೆ ಎಂದರು.

ಶಾದಿಭಾಗ್ಯ- ದೌರ್ಭಾಗ್ಯ
ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಮುಖ್ಯ ಮಂತ್ರಿಯಾಗಿ ಶಾದಿಭಾಗ್ಯ ರೂಪಿಸಿದ್ದರು. ಆದರೆ ಶಾದಿಭಾಗ್ಯ ನೀಡಿದ್ದರಿಂದ ಅವರಿಗೆ ಹಾಗೂ ಅವರ ಪಕ್ಷದವರಿಗೆ ದೌರ್ಭಾಗ್ಯ ಉಂಟಾಗಿದೆ. ಶಾದಿಭಾಗ್ಯ ಬೇಕು ಎಂದರೆ ಮುಂದುವರೆಸಿ ನಮ್ಮ ತರಕಾರಿಲ್ಲ ಎಂದರು.
ವಿಭಿನ್ನ ಚುನಾವಣಾ ತಂತ್ರ
ಬಿಜೆಪಿ ಚುನಾವಣಾ ತಂತ್ರಗಳು ವಿಭಿನ್ನವಾಗಿದೆ. ಬೇರೆಯವರು ಮಾಡಿದಂತೆ ನಾವು ಮಾಡಬೇಕೆಂದಿಲ್ಲ. ಜೆಡಿಎಸ್ ಅವರ ತಂತ್ರಗಳನ್ನು ಮಾಡಲಿ ಎಂದರು. ಸರ್ಕಾರದ ಅವಧಿ ಮುಗಿಯುತ್ತಾ ಬಂದಿರುವ ಹಿನ್ನೆಲೆಯಲ್ಲಿ ಪ್ರಣಾಳಿಕೆ ಯಲ್ಲಿ ಘೋಷಿಸಿರುವ ಯೋಜನೆಗಳು ಎಷ್ಟು ಈಡೇರಿವೆ ಎಂದು ಬಜೆಟ್ ಸಮಯದಲ್ಲಿ ವರದಿ ನೀಡುತ್ತೇವೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸ್ಥಿತಿಯ ಅಭಿವ್ಯಕ್ತಿ
ಘೋಷಿಸಿರುವ 200 ಯೂನಿಟ್ ಉಚಿತ ವಿದ್ಯುತ್ ಹಾಗೂ ಗೃಹಿಣಿಯರಿಗೆ 2000 ರೂ.ಗಳನ್ನು ನೀಡದಿದ್ದರೆ ಸಿದ್ದರಾಮಯ್ಯ ಅವರ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರೇ ರಾಜಕೀಯ ಸನ್ಯಾಸತ್ವದ ಬಗ್ಗೆ ಮಾತನಾಡುತ್ತಾರೆ ಎಂದರೆ ಅವರ ಸ್ಥಿತಿಯ ಅಭಿವ್ಯಕ್ತವಾಗುತ್ತದೆ. ನಾವೇನೂ ಕೇಳಿರಲಿಲ್ಲ. ಮನುಷ್ಯನ ಮನಸ್ಥಿತಿ ಒಳಗಿರುವ ರಾಜಕೀಯ ಸ್ಥಿತಿಯ ಅಭಿವ್ಯಕ್ತಿ ಎಂದರು.

ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆಯಬೇಕು
ಮುಸ್ಲಿಂ ಮತಗಳನ್ನು ಸೆಳೆಯರಿ ಎಂದು ಪ್ರಧಾನಿಗಳು ಹೇಳಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನ್ವೇಡಿ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆಯಬೇಕು. ಅಲ್ಪಸಂಖ್ಯಾತರಲ್ಲಿ ಬಡವರು, ಶಿಕ್ಷಣದ ಕೊರತೆ ಇದೆ.ಅವರನ್ನೂ ಕೂಡ ಮುಖ್ಯವಾಹಿನಿಗೆ ತಂದರೆ ಅವರೂ ದೇಶಕ್ಕೆ ಕೊಡುಗೆ ನೀಡುತ್ತಾರೆ. ಸಬ್ ಕೆ ಸಾಥ್, ಸಬ್ ಕಾ ವಿಶ್ವಾಸ್ ಎನ್ನುವುದನ್ನು ನಾವು ಪಾಲಿಸುತ್ತೇವೆ.
ಕೆಲವು ಬಿಜೆಪಿ ನಾಯಕರು ಮುಸ್ಲಿಂ ಮತಗಳೇ ಬೇಡ ಎಂದಿರುವ ಬಗ್ಗೆ ಉತ್ತರಿಸಿ ಅದು ಅವರ ವೈಯಕ್ತಿಕ ಅಭಿಪ್ರಾಯ. ಯಾರನ್ನೂ ಓಲೈಸುವ ಪ್ರಶ್ನೆಯೇ ಇಲ್ಲ. ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ಪ್ರಧಾನಮಂತ್ರಿಗಳ ನಿಲುವು ಹಾಗೂ ಅನುಭವದ ಮಾತು ಎಂದ ಅವರು, ಮಂಡ್ಯದಲ್ಲಿ ಆರ್.ಅಶೋಕ್ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಿದ ಕಾರಣ ಪಕ್ಷದಲ್ಲಿ ಯಾವುದೇ ವಿರೋಧ ಇಲ್ಲ ಎಂದರು.