ಯಾದಗಿರಿ :ಫೆ.11: ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಿನ್ನೆ ಸಂಜೆ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗವಹಿಸಿದ್ದ ವೇಳೆ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು ಮೊಬೈಕ್ ಕಳೆದುಕೊಂಡಿದ್ದಾರೆ. ಕಾರ್ಯಕ್ರಮದ ವೇದಿಯಲ್ಲಿ ಕುಳಿತಿದ್ದಾಗ ಸುಮಾರು 1.40 ಲಕ್ಷ ಬೆಲೆ ಬಾಳುವ ಐಫೋನ್ ಕಳೆದುಕೊಂಡಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ಎಂ.ಬಿ.ಪಾಟೀಲ್ ಅವರ ಗನ್ ಮ್ಯಾನ್ ಮೊಬೈಲ್ ಹುಡುಕಾಡಿದರು ಕೊನೆಗೆ ಸಿಗಲಿಲ್ಲ.


ಎಂ.ಬಿ.ಪಾಟೀಲ್ ಅವರ ಮೊಬೈಲ್ ಕಳವಾಗಿದೆ ಯಾರಿಗಾದ್ರು ಸಿಕ್ಕಿದ್ದರೆ ಕೂಡಲೇ ತಲುಪಿಸಿ ಎಂದು ಮನವಿ ಮಾಡಿದರು. ಮೊಬೈನಲ್ಲಿ ನೀರಾವರಿ ಇಲಾಖೆ, ಕೆಪಿಸಿಸಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಇವೆ. ಕೂಡಲೇ ಮೋಬೈಲ್ ತಲುಪಿಸಿ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಮನವಿ ಮಾಡಿಕೊಂಡರು.




