Hindu-Muslim Spirituality: ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾಕ್ಷಿಯಾದ ಹಳೇ ಹುಬ್ಬಳ್ಳಿ: ಗಣಪತಿ ವಿಸರ್ಜನೆಯಲ್ಲಿ ಸೌಹಾರ್ದತೆ

ಹುಬ್ಬಳ್ಳಿ: ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಮಹಾನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿಯಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಹಾಗೂ ಸೌಹಾರ್ದತೆ ನಿಜಕ್ಕೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ಮಾರ್ಗದರ್ಶನವಾಗಿದೆ. ಇಂತಹ ಮಹತ್ವದ ಸಂದೇಶಕ್ಕೆ ಹಳೇ ಹುಬ್ಬಳ್ಳಿಯ ಜನರು ಸಾಕ್ಷಿಯಾಗಿದ್ದಾರೆ.

ಹೌದು.. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ನ್ಯೂ ಆನಂದನಗರದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಮತ್ತು ಸೌಹಾರ್ದತೆಯ ಅಂಗವಾಗಿ ಗಣೇಶ ಮೂರ್ತಿ ವಿಸರ್ಜನೆಯ ಕಾಲಕ್ಕೆ ಹಿಂದೂ ಮುಸ್ಲಿಂ ಜನತೆ ಅನ್ಯೋನ್ಯವಾಗಿ ಸ್ನೇಹ ಬಾಂಧವ್ಯದಿಂದ ಆಚರಿಸುವ ಮೂಲಕ ಕಣ್ಮನ ಸೆಳೆದರು.

ಇನ್ನೂ ಇಸ್ಲಾಂ ಧರ್ಮದ ಹಾಗೂ ಹಿಂದೂ ಧರ್ಮದ ಪವಿತ್ರ ಭಾವುಟಗಳನ್ನು ಹಿಡಿದುಕೊಂಡು ಪರಸ್ಪರ ಆತ್ಮೀಯತೆಯಿಂದಲೇ ಆಚರಣೆ ಮಾಡುವ ಮೂಲಕ ಸೌಹಾರ್ದತೆ ಸಾಕ್ಷಿಯಾಗಿದ್ದಾರೆ.

More News