Shivamogga Incident: ಯಾವುದೋ ಸ್ವಾರ್ಥಕ್ಕಾಗಿ ಶಿವಮೊಗ್ಗದಲ್ಲಿ ಗಲಾಟೆ,‌ ಪೊಲೀಸರಿಂದ‌ ಕಾನೂನು ಕ್ರಮ: ಮಧು ಬಂಗಾರಪ್ಪ

ಬೆಂಗಳೂರು: ಯಾವುದೋ ಸ್ವಾರ್ಥಕ್ಕಾಗಿ ಶಿವಮೊಗ್ಗದಲ್ಲಿ ಗಲಾಟೆ ನಡೆದಿದೆ ಎನ್ನಲಾಗಿದೆ.‌ ಈ ನಿಟ್ಟಿನಲ್ಲಿ ಪೊಲೀಸರು ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಶಿವಮೊಗ್ಗದ ರಾಗಿಗುಡ್ಡದಲ್ಲಿ ಮಾತ್ರ ಗೊಂದಲ ಆಗಿದೆ. ಉಳಿದ ಕಡೆ ಯಾವುದೇ ಗಲಾಟೆ ಆಗಿಲ್ಲ. ಯಾವುದೋ ಸ್ವಾರ್ಥಕ್ಕಾಗಿ ಗಲಾಟೆ ಮಾಡಿದ್ದಾರೆ ಅಂತ ಹೇಳಲಾಗ್ತಿದೆ ಎಂದರು.

ಈ ಘಟನೆಯ ಹಿನ್ನಲೆಯಲ್ಲಿ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ತಾರೆ.

ಶಿವಮೊಗ್ಗದಲ್ಲಿ ನಡೆದಿದ್ದು‌ ಹಿಂದೂ ಮುಸ್ಲಿಂ ಗಲಾಟೆ ಅಲ್ಲ

ಶಿವಮೊಗ್ಗದಲ್ಲಿ ನಡೆದಿದ್ದು‌ ಹಿಂದೂ ಮುಸ್ಲಿಂ ಗಲಾಟೆ ಅಲ್ಲ. ಮಾನಸಿಕವಾಗಿ ಅಸ್ವಸ್ಥರಾಗಿದ್ದವರು
ಯಾರೋ ಮಾಡಿದ್ದಾರೆ.‌ಸ್ಥಳೀಯ ಶಾಸಕರಿಗೆ ಎಲ್ಲ ಮಾಹಿತಿ ಬಂದುಬಿಡ್ತಾ? ಕಾರ್ ನಂಬರ್ ಬಗ್ಗೆ ಅವರು ಹೇಳ್ತಿದ್ದಾರೆ? ಹಿಂದೆ ಇದೆಲ್ಲ ಮಾಡಿ ಅನುಭವ ಇತ್ತಂತಾ ಅವರಿಗೆ? ಎಂದು ಪ್ರಶ್ನಿಸಿದರು.

ಜವಾಬ್ದಾರಿ ಸ್ಥಾನದಲ್ಲಿ ಇರುವವರು ಹಾಗೆಲ್ಲ ಮಾತನಾಡಬಾರದು.‌ ಔರಂಗಜೇಬ ಫೋಟೋ ಇರುವುದೇ ಮೂಲ ಕಾರಣ ಅಂತ ಹೇಳಲಾಗ್ತಿದೆ. ಅದಕ್ಕೆಲ್ಲ ಈಗ ಉತ್ತರ ಕೊಡೋದಕ್ಕೆ ಹೋಗಲ್ಲ ಎಂದರು.

ಶಿವಮೊಗ್ಗ ಗಲಭೆಯ ಹಿನ್ನೆಲೆ ತೆಗೆದುಕೊಳ್ಳಬೇಕಾಗುತ್ತದೆ.‌ಈದ್ ಮಿಲಾದ್ ಗಣೇಶ ವಿಸರ್ಜನೆ ಎರಡೂ ಒಟ್ಟಿಗೆ ಬಂದಿತ್ತು.‌ನಾವು ಎರಡೂ ಕಡೆಯ ಮುಖಂಡರ ಸಭೆ ಮಾಡಿದ್ದೆವು. ಈದ್ ಮಿಲಾದ್ ಮೆರವಣಿಗೆ 1 ಕ್ಕೆ ಮಾಡ್ತೀವಿ ಅಂತ ಹೇಳಿದ್ರು. ಗಣೇಶ ಮೆರವಣಿಗೆ ಕೂಡ ಅದ್ಬುತವಾಗಿ ನಡೆದಿತ್ತು.‌ಯಾರೋ ಒಂದಿಷ್ಟು ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ.12 ಜನರಿಗೆ ಚಿಕ್ಕಪುಟ್ಟ ಗಾಯ ಗಳಾಗಿದೆ. ಕಿಡಿಗೇಡಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಕಾಂಗ್ರೆಸ್ ಗೆ ಸಿಎಂ ಇಬ್ರಾಹಿಂ ಬರುವ ಬಗ್ಗೆ ನನಗಂತೂ ಗೊತ್ತಿಲ್ಲ.
ನಿಮಗೆ ಮಾಹಿತಿ ಇದ್ರೆ ಹೇಳಿ ನಾನು ಹೋಗಿ ಮಾತನಾಡ್ತೇನೆ.‌ಅವರು ಹಿರಿಯರು, ನಮ್ಮ ಅಧ್ಯಕ್ಷರು ಹಿರಿಯರು ಇದ್ದಾರೆ ಹೈಕಮಾಂಡ್ ಇದ್ದಾರೆ.‌ಅವರೇ ಎಲ್ಲವನ್ನೂ ನಿರ್ಧಾರ ಮಾಡ್ತಾರೆ ಎಂದರು.

More News