ಕೊಪ್ಪಳ : ಬಸ್ ಮೇಲಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರದ ಅಜ್ಜಿ ಮುತ್ತಿಡೋ ದೃಶ್ಯ ಮನ ಕಲುಕುವಂತಿತ್ತು. ಬಸ್ ನ ಮೇಲಿನ ಧೂಳನ್ನು ತನ್ನ ಸೆರಗಿನಿಂದ ಒರೆಸಿದ ಅಜ್ಜಿ, ಆ ಭಾವಚಿತ್ರಕ್ಕೆ ಮುತ್ತಿಡುತ್ತಾರೆ. ಅಪ್ಪುವಿನ ಮೇಲಿನ ಅಜ್ಜಿಯ ಪ್ರೀತಿ ವ್ಯಕ್ತವಾದ ರೀತಿ ಇದು.
ಕೊಪ್ಪಳ ಜಿಲ್ಲೆಯ ಕುಕನೂರ ಬಸ್ ನಿಲ್ದಾಣದಲ್ಲಿ ಬಸ್ಸೊಂದು ಬಂದು ನಿಲ್ಲುತ್ತದೆ. ಆ ಬಸ್ ನಲ್ಲಿ ಒಂದು ಜಾಹೀರಾತಿನಲ್ಲಿ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರವಿರುತ್ತದೆ. ಇದನ್ನು ನೋಡಿದ ಅಜ್ಜಿ, ಫೋಟೋ ಮೇಲಿದ್ದ ದೂಳನ್ನು ತನ್ನ ಸೆರಗಿನಿಂದ ಒರೆಸುತ್ತಾರೆ,

ಹಾಗೆಯೇ ಅಜ್ಜಿ ತನ್ನ ಕೈಗಳಿಂದ ಭಾವಚಿತ್ರವನ್ನು ಮುಟ್ಟಿ ಮುತ್ತಿಡೋ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.




