ಬೆಂಗಳೂರು : ಬರಗಾಲ ಸಂದರ್ಭದಲ್ಲಿ ಕೇವಲ ಚುನಾವಣಾ ಸಭೆಗಾಗಿ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಎಂ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತ ಚಳವಳಿಗಳ ತವರು ಶಿವಮೊಗ್ಗದಲ್ಲಿ ನಿಂತು ಗೋಲಿಬಾರ್ ಮಾಡಿಸಿ ರೈತರ ಸಾವಿಗೆ ಕಾರಣರಾದ ಬಿ.ಎಸ್ ಯಡಿಯೂರಪ್ಪ ಅವರ ಮಗನಿಗೆ ಮತ ನೀಡಿ ಎನ್ನಲು ನಿಮ್ಮಆತ್ಮಸಾಕ್ಷಿ ಒಪ್ಪುವುದೇ @narendramodi ಅವರೇ?#AnswerMadiModi #ModiMosa pic.twitter.com/2pVBzhBiRX
— Siddaramaiah (@siddaramaiah) March 18, 2024
ಸಾಮಾಜಿಕ ಜಾಲತಾಣದಲ್ಲಿ ರೈತರ ಪರವಾಗಿ ಧ್ವನಿ ಎತ್ತಿರುವ ಕಾಂಗ್ರೆಸ್ಸಿನ ಪ್ರಶ್ನೆಗಳಿಗೆ #ANSERMADI #NARENDRAMODI ಅವರೇ ಎಂಬ ಹ್ಯಾಷ್ ಟ್ಯಾಗ್ ಬಳಸಿ ಕಿಡಿಕಾರಿದ್ದಾರೆ. ಅವರ ಸಂಪೂರ್ಣ ವಿವರ ಇಲ್ಲಿದೆ.
ರೈತ ಚಳವಳಿಗಳ ತವರು ಶಿವಮೊಗ್ಗದಲ್ಲಿ ನಿಂತು ಗೋಲಿಬಾರ್ ಮಾಡಿಸಿ ರೈತರ ಸಾವಿಗೆ ಕಾರಣರಾದ ಬಿ.ಎಸ್ ಯಡಿಯೂರಪ್ಪ ಅವರ ಮಗನಿಗೆ ಮತ ನೀಡಿ ಎನ್ನಲು ನಿಮ್ಮಆತ್ಮಸಾಕ್ಷಿ ಒಪ್ಪುವುದೇ @narendramodi ಅವರೇ? ಎಂದು ಪ್ರಶ್ನಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಕೂಡ @BJP4Karnataka ತಾನು ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೂ. 1 ಲಕ್ಷದ ವರೆಗಿನ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿ, ಅಧಿಕಾರ ಸಿಕ್ಕ ನಂತರ ಕೊಟ್ಟ ಮಾತಿನಂತೆ ನಡೆಯಲೇ ಇಲ್ಲ.
— Siddaramaiah (@siddaramaiah) March 18, 2024
ಇದು ರೈತರಿಗೆ ಮಾಡಿದ ದ್ರೋಹ ಅಲ್ಲವೇ @narendramodi ಅವರೇ?#AnswerMadiModi… pic.twitter.com/NkzWPgA7Fz
ಹಾಗೆಯೇ, ಕಳೆದ ಚುನಾವಣೆಯಲ್ಲಿ ಕೂಡ @BJP4Karnataka ತಾನು ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೂ. 1 ಲಕ್ಷದ ವರೆಗಿನ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿ, ಅಧಿಕಾರ ಸಿಕ್ಕ ನಂತರ ಕೊಟ್ಟ ಮಾತಿನಂತೆ ನಡೆಯಲೇ ಇಲ್ಲ. ಇದು ರೈತರಿಗೆ ಮಾಡಿದ ದ್ರೋಹ ಅಲ್ಲವೇ @narendramodi ಅವರೇ? ಎಂದು ಕಿಡಿಕಾರಿದ್ದಾರೆ.
ರಾಜ್ಯಕ್ಕೆ ಬರಪರಿಹಾರ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ @BJP4India ಸರ್ಕಾರಕ್ಕೆ ಮೇಲಿಂದ ಮೇಲೆ ಪತ್ರ ಬರೆಯಲಾಗಿದೆ, ನಮ್ಮ ಸಚಿವರು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ, ನಾನೇ ಖುದ್ದಾಗಿ ತಮ್ಮನ್ನು ಹಾಗೂ ಗೃಹ ಸಚಿವರಾದ @AmitShah ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದೇನೆ, ಆದರೂ ನಯಾಪೈಸೆ ರಾಜ್ಯಕ್ಕೆ ಬಂದಿಲ್ಲ.
— Siddaramaiah (@siddaramaiah) March 18, 2024
ಇದು… pic.twitter.com/swdpvYhJQB
ರಾಜ್ಯಕ್ಕೆ ಬರಪರಿಹಾರ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರ @BJP4India ಸರ್ಕಾರಕ್ಕೆ ಮೇಲಿಂದ ಮೇಲೆ ಪತ್ರ ಬರೆಯಲಾಗಿದೆ, ನಮ್ಮ ಸಚಿವರು ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ, ನಾನೇ ಖುದ್ದಾಗಿ ತಮ್ಮನ್ನು ಹಾಗೂ ಗೃಹ ಸಚಿವರಾದ @AmitShah ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದೇನೆ, ಆದರೂ ನಯಾಪೈಸೆ ರಾಜ್ಯಕ್ಕೆ ಬಂದಿಲ್ಲ. ಇದು ರಾಜ್ಯದ ರೈತರಿಗೆ ಮಾಡಿದ ಅನ್ಯಾಯವಲ್ಲವೇ @narendramodi ಅವರೇ? #AnswerMadiModi #ModiMosa ಎಂದು ಹ್ಯಾಷ್ ಟ್ಯಾಗ್ ಬಳಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.