Accident: ಕೀರೆಸೂರ ಬಳಿ ಭೀಕರ ಅಪಘಾತ: ಉಸಿರು ನಿಲ್ಲಿಸಿದ 12 ಕುರಿಗಳು

ಹುಬ್ಬಳ್ಳಿ: ಚಾಲಕನ ತೀವ್ರವಾದ ನಿರ್ಲಕ್ಷ್ಯದಿಂದ ವೇಗವಾಗಿ ಬಂದ ಲಾರಿಯೊಂದು ಕುರಿ ಹಿಂಡಿನ ಮೇಲೆ ಹರಿದ ಪರಿಣಾಮ ಹನ್ನೆರಡಕ್ಕೂ ಹೆಚ್ಚು ಜೀವಗಳು ಉಸಿರು ನಿಲ್ಲಿಸಿದ್ದು, ಹಲವು ಕುರಿಗಳು ನಿತ್ರಾಣಗೊಂಡಿವೆ.

ಹುಬ್ಬಳ್ಳಿ ತಾಲೂಕಿನ ಕಿರೇಸೂರ ಬಳಿಯಲ್ಲಿ ಘಟನೆ ನಡೆದಿದ್ದು, ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ಸಾರೆ.

ಮುಧೋಳ ಮೂಲದ ಕುರಿಗಾರರು ಮಾಲೀಕರೆಂದು ಹೇಳಲಾಗಿದ್ದು, ಮತ್ತಷ್ಟು ಮಾಹಿತಿ ಸಿಗಬೇಕಿದೆ.

More News