ಹುಬ್ಬಳ್ಳಿ: ಮೈಸೂರು ರಸ್ತೆಗೆ ಸಿದ್ದರಾಮಯ್ಯ ಹೆಸರಿಡೋ ವಿಚಾರಕ್ಕೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಅವರು ಲೆಫ್ಟಿಸ್ಟ್ ವಿಚಾರ ಧಾರೆಯವರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಲೆಫ್ಟಿಸ್ಟ್ ಸಹ ಇದಕ್ಕೆ ವಿರೋಧ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಅನಗತ್ಯ ವಿಚಾರದಲ್ಲಿ ಬೀಳಬಾರದು. ಅವರ ಹಗರಣಗಳ ಬಗ್ಗೆ ನಾವು ಮಾತನಾಡಿದ್ದೇವೆ. ಧೀರ್ಘ ಅಧಿಕಾರದಲ್ಲಿ ಇದ್ದವರು, ಚಿಲ್ಲರೆಯಲ್ಲಿ ಸಿಲುಕಬೇಡಿ ಎಂದ ಜೋಶಿ ತಿಳಿ ಹೇಳಿದರು.




