ಬೆಂಗಳೂರು : ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಶಿವಾರಪಟ್ಟಣ ಗ್ರಾಮದಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರವನ್ನು ಹತ್ತು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.ಈಗಾಗಲೇ ನಾಲ್ಕು ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ಇಂದು ನಯನ ರಂಗಮಂದಿರದಲ್ಲಿ ವಿಶ್ವಕರ್ಮ ಜಯಂತಿ ಉದ್ಘಾಟನೆ ಮಾಡಿ ಮಾತನಾಡಿದ ಅವರು.ಮಾಲೂರಿನ ಶಿವಾರಪಟ್ಟಣದಲ್ಲಿ ನಾಲ್ಕು ಎಕರೆ ಜಾಗದಲ್ಲಿ ಶಿಲ್ಪಕಲಾ ಕೇಂದ್ರವನ್ನು ನಿರ್ಮಾಣ ಮಾಡಲಾಗುತ್ತಿದೆ.ಇದು ಕುಶಲಕರ್ಮಿಗಳಿಗೆ ನೆರವಾಗಲಿದೆ.ಭಗವಾನ್ ವಿಶ್ವಕರ್ಮ ಈ ಜಗತ್ತಿನ ಮೊಟ್ಟ ಮೊದಲ ಇಂಜಿನಿಯರ್ ಎಂದು ಬಣ್ಣಿಸಿದರು.ರಾಮಾಯಣ ಮತ್ತು ಮಹಾಭಾರತದಲ್ಲು ವಿಶ್ವಕರ್ಮರ ಉಲ್ಲೇಖವಿದೆ.ಪಾಂಡವರಿಗಾಗಿ ಇಂದ್ರಪ್ರಸ್ಥವನ್ನು ನಿರ್ಮಾಣ ಮಾಡಿದ್ದು,ದ್ವಾರಕ್ಕೆ ನಗರ ನಿರ್ಮಾಣ ಮಾಡಿದ್ದು ಹಾಗೂ ಸ್ವರ್ಣವಲ್ಲಿ ಲಂಕೆಯ ನಿರ್ಮಾತೃ ಕೂಡ ವಿಶ್ವಕರ್ಮರ ಎಂದು ನಮ್ಮ ಪೌರಾಣಿಕ ಐತಿಹ್ಯ ತಿಳಿಸುತ್ತದೆ ಎಂದು ಅವರು ಇತಿಹಾಸವನ್ನು ಸ್ಮರಿಸಿದರು.

ಹಿಂದುಳಿದ ಅನೇಕ ಸಣ್ಣ ,ಸಣ್ಣ ಸಮುದಾಯಗಳು ಸಾಮಾಜಿಕ,ಆರ್ಥಿಕ ಮತ್ತು ಶೈಕ್ಷಣಿಕವಾಗಿ ಬೆಳೆಯಬೇಕು ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಸಶಕ್ತವಾಗಬೇಕಾದರೆ,ಎಲ್ಲ ಹಿಂದುಳಿದ ಸಣ್ಣ ಸಮುದಾಯಗಳು ಒಗ್ಗೂಡಿ ಕೆಲಸ ಮಾಡಬೇಕು.ಅದರಲ್ಲಿ ಯೂ ವಿಶೇಷವಾಗಿ ವಿಶ್ವಕರ್ಮ ಸಮುದಾಯ ತನ್ನ ವೃತ್ತಿ ಪರತೆ,ಸರಳತೆ ಮತ್ತು ಕರ್ತವ್ಯ ನಿಷ್ಠೆಗೆ ಹೆಸರಾಗಿದೆ.ಈ ಸಮುದಾಯ ತನ್ನ ಭವ್ಯ ಸಾಂಸ್ಕೃತಿಕ ಪರಂಪರೆ ಯನ್ನು ಮುಂದಿನ ಪೀಳಿಗೆಗೂ ಸಾಗಿಸಬೇಕಾದ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.
ಎಲ್ಲ ಮಹನೀಯರ ಜಯಂತಿಗಳ ಉದ್ದೇಶ ಆಯಾ ಮಹಾಪುರುಷರು ಪಾಲಿಸಿದ ಜೀವನಾದರ್ಶಗಳ ಜೀವನ ಮೌಲ್ಯಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕು.ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎಂಬುದೇ ಆಗಿದೆ.ಹಾಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಜಯಂತಿಗಳನ್ನು ವಿಶೇಷ ಮುತುವರ್ಜಿಯಿಂದ ಮಾಡುತ್ತಿದೆ ಎಂದರು.
ಸಮಾರಂಭದಲ್ಲಿ ನಿಟ್ಟರಹಳ್ಳಿ ಮಠದ ರಾಮಚಂದ್ರ ಸ್ವಾಮೀಜಿ,ನೀಲಕಂಠಚಾರ್ಯ ಶ್ರೀ,ವಿಶ್ವಕರ್ಮ ಅಭಿವೃದ್ಧಿ ನಿಗಮ ನಿಯಮಿ ತದ ಅಧ್ಯಕ್ಷ ಬಾಬು ಪತ್ತಾರ್,ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ ಸೇರಿದಂತೆ ಪ್ರಮುಖರು ಹಾಜರಿದ್ದರು.