ಬೆಂಗಳೂರು: ಜನಪ್ರತಿನಿಧಿಗಳ ನಡವಳಿಕೆಯಿಂದ ಸದನದ ಗೌರವ ಹೆಚ್ಚುತ್ತದೆ.ಸದನದ ಗೌರವ ಹೆಚ್ಚಿಸುವುದು ಎಲ್ಲಾ ಪಕ್ಷಗಳ ಜವಾಬ್ದಾರಿಯಾಗಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು,ಸದನದ ಗೌರವ ಹೆಚ್ಚಿಸುವಲ್ಲಿ ಜನಪ್ರತಿನಿಧಿಗಳ ಕೊಡುಗೆ ಅಪಾರವಾಗಿದೆ.ಸದನದ ಗೌರವ ಹೆಚ್ಚಿಸುವುದು ಎಲ್ಲಾ ಪಕ್ಷಗಳ ಜವಾಬ್ದಾರಿಯಾಗಿದೆ.ಯಾವುದೇ ಕಾನೂನು ತರುವ ಹೊಣೆ ಸರ್ಕಾರದ್ದಾಗಿದೆ.ಸ್ಪೀಕರ್ ಆ ಬಗ್ಗೆ ಚರ್ಚೆ ನಡೆಯುವಂತೆ ನೋಡಿಕೊಳ್ಳಬೇಕು.ನಮ್ಮ ಕೆಲಸ ಸರ್ಕಾರ ತರುವ ನೀತಿ ಮೇಲೆ ಚರ್ಚೆ ನಡೆಸುವಂತೆ ಮಾಡುವುದಾಗಿದೆ.
ಸಂಸತ್ ಮತ್ತು ವಿಧಾನಸಭೆಗಳ ಮೂಲಕ ಜನರ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನ ಪಡಲಾಗುತ್ತಿದೆ.ಲೋಕ ತಂತ್ರದ ಸಂಸ್ಥೆಗಳು ಗಟ್ಟಿಯಾಗಬೇಕು.ಸದನ ನಡೆಸಲು ಎಸ್ ಒಪಿ ಯನ್ನೂ ರಚಿಸುತ್ತೇವೆ.ಅದನ್ನು ಎಲ್ಲಾ ರಾಜ್ಯಗಳು ತಮ್ಮಲ್ಲಿ ಅಳವಡಿಸಬಹುದಾಗಿದೆ ಎಂದು ಅವರು ತಿಳಿಸಿದರು.

ಸದನದಲ್ಲಿನ ಗದ್ದಲ ಚಿಂತೆಯ ವಿಚಾರ : ಸದನದಲ್ಲಿ ಗದ್ದಲ ಉಂಟಾಗುತ್ತಿರುವ ಬಗ್ಗೆ ಪ್ರತಿಕ್ರಿಯಸಿದ ಅವರು,ಸದನ ಸುಗಮವಾಗಿ ನಡೆಯುವಂತೆ ಮಾಡಯವುದು ಎಲ್ಲರ ಸಾಮೂಹಿಕ ಹೊಣೆಯಾಗಿದೆ.
ಸದನದಲ್ಲಿ ಗದ್ದಲ ನಮಗೆ ಚಿಂತೆಯ ವಿಚಾರವಾಗಿದೆ.ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳ ಸ್ಪೀಕರ್,ಸಿಎಂಗಳು ವ್ಯಾಪಕವಾದ ಚರ್ಚೆ ನಡೆಸಿದ್ದಾರೆ.ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಸದನದಲ್ಲಿ ಗದ್ದಲ ಉಂಟಾಗ ದಂತೆ,ಚರ್ಚೆ ಆಗುವಂತೆ ನೋಡಿಕೊಳ್ಳುವುದು ಎಲ್ಲರ ಸಾಮೂಹಿಕ ಹೊಣೆಯಾಗಿದೆ.ಪ್ರತಿಪಕ್ಷಗಳು ತಮ್ಮ ವಿಚಾರಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬೇಕು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಸದನದ ಒಳಗಡೆ ಅನುಶಾಸನ,ಗೌರವ ಕಾಪಾಡುವ ನಿಟ್ಟಿನಲ್ಲಿ ಶಿಮ್ಲಾದಲ್ಲಿ ನಡೆಯುವ ಸಮ್ಮೇಳನದಲ್ಲಿ ಸಮಾಲೋಚನೆ ನಡೆಸು ತ್ತೇವೆ.ಲೋಕತಂತ್ರಗಳ ಸಂಸ್ಥೆಗಳ ಎಲ್ಲಾ ಪೀಠಾಸೀನ ಅಧಿಕಾರಿಗಳ ಜೊತೆ ಚರ್ಚಿ ಸಿ ಪೂರಕವಾದ ಒಂದು ನಿರ್ಧಾರಕ್ಕೆ ಬರಲಿ ದ್ದೇವೆ.ಲೋಕತಂತ್ರ ದೇಶದ ಆತ್ಮವಾಗಿದೆ.ನಮ್ಮ ಜೀವನ, ಸಂಸ್ಕೃತಿ ವಿಚಾರದಲ್ಲಿ ಸದಾ ಲೋಕತಂತ್ರ ಇರುತ್ತದೆ.ಈ ಹಿಂದೆ ಗ್ರಾಮೀ ಣ ಪ್ರದೇಶಗಳಲ್ಲಿ ಲೋಕತಾಂ ತ್ರಿಕವಾಗಿನೇ ನಿರ್ಧಾರ ತೆಗೆದುಕೊಳ್ಳಲಾಗುತ್ತಿತ್ತು.ಹೀಗಾಗಿ ಲೋಕತಾಂತ್ರಿಕ ಸಂಸ್ಥೆಯನ್ನು ಇನ್ನಷ್ಟು ಬಲ ಪಡಿಸಿ ಜನರ ಕಲ್ಯಾಣಕ್ಕೆ ಕೆಲಸ ಮಾಡಬೇಕಾಗಿದೆ ಎಂದು ಅವರು ವಿವರಿಸಿದರು.

ಚರ್ಚೆಯಾಗದೇ ಬಿಲ್ ಪಾಸ್ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಇದೇ ವೇಳೆ ತಿಳಿಸಿ ದರು.ಸದನದಲ್ಲಿ ವಿಧೇಯಕದ ಮೇಲೆ ಚರ್ಚೆಯಾಗದೇ ಅಂಗೀಕಾರವಾಗುವುದು ಒಳ್ಳೆಯ ಬೆಳವಣಿ ಗೆಯಲ್ಲ.ಚರ್ಚೆ ಆಗಬೇಕು.ಆಗ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಪಕ್ಷಾಂತರ ನಿಷೇಧ ಕಾಯ್ದೆ ಸಂಬಂಧ ಶೀಘ್ರ ನಿರ್ಧಾರ : ಪಕ್ಷಾಂತರ ನಿಷೇಧ ಕಾಯ್ದೆ ಸಂಬಂಧಪಟ್ಟಂತೆ ರಾಜಸ್ತಾನ ಸ್ಪೀಕರ್ ಸಿ.ಪಿ.ಜೋಶಿ ನೇತೃತ್ವದ ಸಮಿತಿ ವರದಿ ನೀಡಿದೆ.ಈ ವರದಿಯನ್ನು ಶಿಮ್ಲಾ ಅ.26-28ರ ವರೆಗೆ ನಡೆಯಲಿರುವ ಪೀಠಾಸೀನ ಅಧಿಕಾರಿ ಗಳ ಸಮ್ಮೇಳನದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಸ್ಪೀಕರ್ ಅವರ ಕಾರ್ಯವ್ಯಾಪ್ತಿ, ನಿಯಮದಲ್ಲಿನ ಸ್ಪಷ್ಟತೆ ಮತ್ತು ಯಾವ ಕಾಲಮಿತಿಯೊಳಗೆ ಮಾಡಬೇಕು ಎಂಬ ಬಗ್ಗೆ ನಿಯಮ ರೂಪಿಸ ಲಾಗುತ್ತದೆ ಎಂದು ವಿವರಿಸಿದರು.
ಪೀಠಾಸೀನ ಅಧಿಕಾರಿಗಳು ಪಕ್ಷಾಂತರ ನಿಷೇಧ ಕಾಯ್ದೆಯಡಿ ನಿರ್ಣಯ ಕೈಗೊಳ್ಳಬೇಕಾದ ಕಾಲಾವಧಿ ಏನು?. ಈ ಸಂಬಂಧ ಸ್ಪೀಕ ರ್ ಗಳ ಅಧಿಕಾರ ಸೀಮಿತ ಮಾಡುವ ಬಗ್ಗೆನೂ ಪ್ರಸ್ತಾಪಿಸಿದ್ದಾರೆ.ಈ ಎಲ್ಲದರ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಸಂಸತ್ ಭವನ ದೇಶದ ಸಂಸ್ಕೃತಿ ಪ್ರತಿಬಿಂಬಿಸಲಿದೆ : ಸದ್ಯದ ಸಂಸತ್ ಭವನಕ್ಕೆ 100 ವರ್ಷ ಆಗಿದೆ. ಅಕ್ಟೋಬರ್ 2022ಕ್ಕೆ ನೂತನ ಸಂಸತ್ ಭವನ ಕಾಮಗಾರಿ ಪೂರ್ಣ ಗೊಳ್ಳಿದೆ.ಈ ಸಂಸತ್ ಭವನ ದೇಶದ ವೈವಿದ್ಯತೆ,ಸಂಸ್ಕೃತಿ ಪ್ರತಿಬಿಂಬಿಸಲಿದೆ.ಹೊಸ ಸಂಸತ್ ಭವನದಿಂದ ಸಂಸದರ ಕಾರ್ಯಕ್ಷಮತೆ ಇನ್ನಷ್ಟು ಹೆಚ್ಚಲಿದೆ.ಮುಂದಿನ ದಿನಗಳಲ್ಲಿ ಲೋಕಸಭೆ ಸೀಟ್ ಹೆಚ್ಚುವ ಹಿನ್ನೆಲೆ ಹೊಸ ಸಂಸತ್ ಭವನ ಕಟ್ಟಲಾ ಗುತ್ತಿದೆ.ಮುಂದಿನ 100 ವರ್ಷ ದೃಷ್ಟಿಯಲ್ಲಿಟ್ಡುಕೊಂಡು ಸಂಸತ್ ಭವನ ನಿರ್ಮಿಸಲಾಗುತ್ತಿದೆ ಎಂದರು.