2023ರ ಚುನಾವಣೆಯಲ್ಲಿ 25% ಯುವಕರಿಗೆ ಟಿಕೆ ಟ್ :ಮಿಷನ್ 123 ನಮ್ಮ ಛಲ-ಎಚ್.ಡಿ.ಕುಮಾರ ಸ್ವಾಮಿ

ಬೆಂಗಳೂರು: ಮಿಷನ್ 123 ಎನ್ನುವುದು ನಮ್ಮ ಗುರಿ ಮಾತ್ರವಲ್ಲ ಛಲವೂ ಹೌದು ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಬಿಡದಿಯ ತೋಟದಲ್ಲಿ ಜನತಾ ಪರ್ವ 1.O ಹಾಗೂ ಮಿಷನ್ 123 ಕಾರ್ಯಗಾರದ ನಾಲ್ಕನೇ ದಿನ ಮಾಧ್ಯ ಮಗಳ ಜತೆ ಮಾತ ನಾಡಿದ ಅವರು,ನಿಗದಿತ ಗುರಿ ಮುಟ್ಟಲು 224 ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತೇವೆ ಎಂದರು.

ಜನತೆಗೆ ನಾವು ವಾಗ್ದಾನ ಮಾಡುತ್ತಿರುವ ಪಂಚರತ್ನ ಕಾರ್ಯಕ್ರಮಗಳ ಮಾಹಿತಿಯನ್ನು ಮನೆ ಮನೆಗೂ ತಲುಪಿಸಲಾಗುವುದು.ಈ ನಿಟ್ಟಿನಲ್ಲಿ ಜೆಡಿಎಸ್ ಪರಿವಾರ ಮುಂದಿನ ಹದಿನೇಳು ತಿಂಗಳ ಕಾಲ ರಾಜ್ಯದ ಉದ್ದಗಲಕ್ಕೂ ಅವಿಶ್ರಾಂತವಾಗಿ ಕೆಲಸ ಮಾಡಲಿದೆ ಎಂದು ಅವರು ಮಾಹಿತಿ ನೀಡಿದರು.

ಆಪ್ ಮೂಲಕ ಸದಸ್ಯತ್ವ: ಜನರ ಮನ -ಮನೆ ಮುಟ್ಟುವ ನಿಟ್ಟಿನಲ್ಲೇ ಈಗಾಗಲೇ ಎಲ್ಲ ಕಾರ್ಯಕ್ರಮಗಳ ರೂಪುರೇಷೆಗಳನ್ನು ಸಿದ್ದ ಮಾಡಿಕೊಂಡಿದ್ದೇವೆ.ಮುಖ್ಯವಾಗಿ ಹೊಸ ತಲೆಮಾರಿನ ಯುವಜನರಿಗೆ ಪಕ್ಷದ ಬಗ್ಗೆ ವಿಶ್ವಾಸ ತುಂಬುವ ಪ್ರಯತ್ನವನ್ನು ದೊಡ್ಡ ಮಟ್ಟದಲ್ಲಿ ಮಾಡಲಾಗುವುದು.ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕೊಡಲಾಗುವುದು ಎಂದು ತಿಳಿಸಿದರು.

ಪಕ್ಷದ ಸದಸ್ಯತ್ವ ಪಡೆಯಲು ಯಾರೂ ಎಲ್ಲೂ ಹೋಗಬೇಕಿಲ್ಲ.ಇದ್ದ ಜಾಗದಲ್ಲಿಯೇ ಸದಸ್ಯತ್ವ ಪಡೆಯಲು ಆಪ್ ಸಿದ್ದ ಮಾಡ ಲಾಗುತ್ತಿದೆ.ಆದಷ್ಟು ಬೇಗ ಈ ಆ್ಯಪ್ ಅನ್ನು ಬಳಕೆಗೆ ಸಿಗಲಿದೆ.ಯಾರು ನಮ್ಮ ಪಕ್ಷದ ಸದಸ್ಯರಾಗುತ್ತರೆ ಅವರ ಕುಟುಂಬಕ್ಕೆ ಐಡೆಂ ಟಿಟಿ‌ ಕಾರ್ಡ್ ಕೊಡುತ್ತೇವೆ.ಇದಕ್ಕೆಲ್ಲ ಆಧುನಿಕ ತಂತ್ರಜ್ಞಾನ ಉಪಯೋಗಿಸುತ್ತೇವೆ.ಹೀಗೆ ಸದಸ್ಯತ್ವ ಪಡೆದವರಿಗೆ ಸದಸ್ಯರ ನಿಧಿ ಸೌಲಭ್ಯ ಇಡಲಾಗುತ್ತದೆ.ಉತ್ತಮವಾಗಿ ಓದುವ ಸದಸ್ಯರ ಮಕ್ಕಳಿಗೆ ಆರ್ಥಿಕ ನೆರವು ನೀಡುತ್ತೇವೆ.ಅಲ್ಲದೆ ಸದಸ್ಯರ ಮನೆಯಲ್ಲಿ ಸಮಸ್ಯೆ, ಅವಘಡ ಗಳಾದರೆ ಅಂತವರಿಗೂ ಆರ್ಥಿಕ‌ ನೆರವು ಕೊಡಲಾಗುವುದು ಎಂದು ಅವರು ಭರವಸೆ ನೀಡಿದರು.

ಇನ್ನು ಮುಂದೆ ಪಕ್ಷದ ಎಲ್ಲಾ ಘಟಕಗಳು ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತವೆ.ಹೊಸಬರನ್ನು ಪಕ್ಷಕ್ಕೆ ಕರೆತರುವುದು ಇರಬಹುದು ಅಥವಾ ಮನವೊಲಿಕೆ ಇರಬಹುದು.ಇವೆಲ್ಲವೂ ನಿತ್ಯ ಕಾರ್ಯಕ್ರಮ ಆಗಬೇಕು.ಪ್ರತಿ ಜಿಲ್ಲೆಯಲ್ಲೂ ಪಕ್ಷದ ವ್ಯವಸ್ತೆಯನ್ನು ಚುರುಕು ಮಾಡುತ್ತೇವೆ.ಯುವಕರಿಗೆ ಜವಾಬ್ದಾರಿ ನೀಡುತ್ತಿದ್ದೇನೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.

ನಾಲ್ಕು ದಿನದ ಕಾರ್ಯಗಾರದಿಂದ ಪಕ್ಷದ ನಾಯಕರಲ್ಲಿ ಕಾರ್ಯಕರ್ತರಲ್ಲಿ ಹುರುಪು ಬಂದಿದೆ.ಎಲ್ಲರಿ ಗೂ ಗೆಲ್ಲಲೇ ಬೇಕೆಂಬ ಛಲ ಬಂದಿದೆ.ಅಭ್ಯರ್ಥಿಗಳಾಗಬೇಕು ಎಂದು ಗುರುತಿಸಲಾಗಿರುವ ಎಲ್ಲರಿಗೂ ಮೂರು ತಿಂಗಳ ಗಡುವು ನೀಡಲಾಗಿದೆ.ನಾವು ಶಾಸಕರಾ ಗಬೇಕು ಅಂತ ಹುಮ್ಮಸ್ಸು ಅವರಿಗೆ ಬಂದಿದೆ. ಯುವ ಜನತಾದಳದ ಕಾರ್ಯಕ್ರಮದಲ್ಲೂ ಹುಮ್ಮಸ್ಸು ನೋಡ್ತಾ ಇದ್ದೇವೆ ಎಂದು ಅವರು ವಿವರಿಸಿದರು.

ಪಂಚರತ್ನ ಕಾರ್ಯಕ್ರಮ ತರಲು ತೀರ್ಮಾನ ಮಾಡಿರುವುದು,ಆ ಬಗ್ಗೆ ನಾಲ್ಕೂ ದಿನ ನೀಡಿದ್ದೇನೆ. ಇದನ್ನು ಜನತೆ ಮುಂದೆ ತೆಗದು ಕೊಂಡು‌ ಹೋದರೆ ಜನತೆ ನಮಗೆ ಬೆಂಬಲ ನೀಡ್ತಾರೆ ಎನ್ನುವ ಭರವಸೆ ಇದೆ. ಪ್ರತಿ ತಾಲೂಕು,ಹೋಬಳಿ,ಹಳ್ಳಿ ಮಟ್ಟದಲ್ಲೂ ಕಾರ್ಯಕ್ರಮ ಮಾಡುತ್ತೇವೆ ಎಂದರು.

ಇದಕ್ಕೆ ಪೂರಕವಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಅವರಿಬ್ಬರೂ ಜೊತೆಯಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾರೆ.ಯುವ ಪಡೆ ಕಟ್ಟಲು ಹೇಳಿದ್ದೇನೆ ಎಂದು ಅವರು ತಿಳಿಸಿದರು.

ರಾಜ್ಯದ ಜೀವಾಳವೇ ನೀರಾವರಿ : ಈಗಾಗಲೇ ನೀರಾವರಿ ಯೋಜನೆಗಳ ಬಗ್ಗೆಯೂ ಪಕ್ಷದ ಕಾರ್ಯಗಾರ ದಲ್ಲಿ ಚರ್ಚೆ ಮಾಡಿದ್ದೇವೆ. ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಬಗ್ಗೆ ಸಮಗ್ರ ಅಭಿವೃದ್ಧಿ ಬಗ್ಗೆ ನಮ್ಮ ದೇ ಪರಿಕಲ್ಪನೆ ಇದೆ.ನೀರಾವರಿ ಯೋಜನೆಗಳು ಎಂದರೆ ಹಣ ಲೂಟಿ ಹೊಡೆಯುವ ಯೋಜನೆಗಳು ಆಗಬಾರದು ಎಂದು ಅವರು ಆಶಯ ವ್ಯಕ್ತಪಡಿಸಿದರು.

ಯುವಕರಿಗೆ ಹೆಚ್ಚಿನ ಆದ್ಯತೆ : ಮುಂದಿನ ಚುನಾವಣೆಯಲ್ಲಿ ಕೊನೆಪಕ್ಷ 30-35 ಮಹಿಳೆಯರಿಗೆ ಅವಕಾಶ ನೀಡಬೇಕು ಎಂದುಕೊಂ ಡಿದ್ದೇವೆ.ಹಾಗೆಯೇ ಯುವಕರಿಗೆ 25% ಜನರಿಗೆ ಟಿಕೆಟ್ ಕೊಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.ಆ ಬಗ್ಗೆ ಗಂಭೀರ ವಾಗಿ ಪರಿಶೀಲನೆ ಮಾಡುತ್ತೇವೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

More News

You cannot copy content of this page