Search

AL QAEDA: ‘ಭಾರತದ ಧೈರ್ಯಶಾಲಿ ಮಹಿಳೆ’ ಮಂಡ್ಯ ಹುಡುಗಿಗೆ ಸಾಹಿತ್ಯ ಬರೆದು ವಿಡಿಯೋ ಮಾಡಿದ ಮೋಸ್ಟ್ ವಾಂಟೆಡ್ ಉಗ್ರ

ಬೆಂಗಳೂರು : ಹಿಜಾಬ್ ಸಂಘರ್ಷದ ವೇಳೆ ಮಂಡ್ಯದಲ್ಲಿ ವಿದ್ಯಾರ್ಥಿನಿಯೊಬ್ಬಳು ಅಲ್ಲಾಹು ಅಕ್ಬರ್ ಎಂಬ ಘೋಷಣೆ ಕೂಗಿ ಧೈರ್ಯ ತೋರಿದ್ದ ಮುಸ್ಕಾನ್‌ಳನ್ನ ಅಲ್ ಖೈದಾ ಸಂಘಟನೆಯ ಮುಖಂಡ ಮೋಸ್ಟ್ ವಾಟೆಂಡ್ ಉಗ್ರ ಹಾಡಿ ಹೊಗಳಿದ್ದಾನೆ.
ಅಲ್‌ಖೈದಾ ಮುಖ್ಯಸ್ಥ ಅಯಮಾನ್ ಅಲ್‌ಜವಾಹಿರಿ ಈ ಹೇಳಿಕೆ ನೀಡಿದ್ದು, ಭಾರತದ ಧೈರ್ಯಶಾಲಿ ಮಹಿಳೆ ಎಂದು ಅಲ್‌ಖೈದಾ ಶ್ಲಾಘನೆ ಮಾಡಿದೆ. ಅಯಮಾನ್ ಒಸಾಮಾ ಬಿನ್ ಲಾಡೆನ್‌ಗೂ ಆಪ್ತನಾಗಿದ್ದ ಆತ, ಮುಸ್ಕಾನ್ ಸಂಬಂಧ ಸಾಹಿತ್ಯ ಬರೆದು, ವಿಡಿಯೋ ಮಾಡಿದ್ದಾನೆ.
ಈ ಸಂಬಂಧ ಮುಸ್ಕಾನ್ ತಂದೆ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರವನ್ನು ಬೆಳಸಬಾರದು ಇದನ್ನು ಇಲ್ಲಿಯೇ ಬಿಟ್ಟುಬಿಡಿ ಎಂದು ಮನವಿ ಮಾಡಿದ್ದಾರೆ. ಉಡುಪಿಯಲ್ಲಿ ಪ್ರಾರಂಭವಾದ ಹಿಜಾಬ್ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿದೆ.
ಇಂತಹ ಉಗ್ರ ಸಂಘಟನೆಗಳ ಹೇಳಿಕೆಯನ್ನು ಖಂಡಿಸುವುದಾಗಿ ಸಚಿವ ಅಶ್ವಥ್ ನಾರಾಯಣ ಹೇಳಿದ್ದಾರೆ. ನಮ್ಮ ಆಂತರಿಕ ವಿಷಯದಲ್ಲಿ ಮೂಗು ತೂರಿಸುವುದು ಬೇಡ ಎಂದು ಹೇಳಿದ್ದಾರೆ.

ಸರ್ಕಾರದ ಮೌನದಿಂದ ಇಂತಹ ಘಟನೆಗಳು ನಡೆಯುತ್ತವೆ, ಇಂತಹ ವಾತಾವರಣ ನಿರ್ಮಾಣ ಮಾಡುವುದನ್ನು ಬಿಟ್ಟುಬಿಡಬೇಕು. ಅಷ್ಟು ಸುಲಭವಾಗಿ ನಮ್ಮ ರಾಜ್ಯದವರು ಅಂತಹ ಸಂಘಟನೆಯನ್ನು ಪೋಶಿಸುವುದಿಲ್ಲ ಎಂದು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

More News

You cannot copy content of this page