Search

HOME MINISTER HAS TO RESIGN: ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ: ಇದರಿಂದ ನಿಮ್ಮ ಗೌರವ ಹೆಚ್ಚುತ್ತೆ: ವಾಟಾಳ್ ನಾಗರಾಜ್

ಬೆಂಗಳೂರು : ನಿಮಗೆ ಗೃಹ ಸಚಿವ ಸ್ಥಾನ ಯಾಕೆ ಕೊಡಲಾಗಿದೆ ಅನ್ನೋ ಚರ್ಚೆ ಬೇಡ. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಕೊಟ್ರೆ ನಿಮಗೂ ಘನತೆ ಬರುತ್ತೆ, ಗೃಹಸಚಿವ ಸ್ಥಾನದ ಮಾನ ಉಳಿಯುತ್ತೆ ಎಂದು ಕಿಡಿಕಾರಿದ್ದಾರೆ. ರಾಜೀನಾಮೆ ನೀಡುವುದರ ಮೂಲಕ ನಿಮ್ಮ ಗೌರವ ಹೆಚ್ಚುತ್ತೆ ಎಂದು ವ್ಯಂಗ್ಯವಾಡಿದ್ದಾರೆ.
ಕರ್ನಾಟಕದಲ್ಲಿ ಏನಾಗ್ತಿದೆ ಅಂತ ಅರ್ಥವಾಗುತ್ತಿಲ್ಲ, ಸರ್ವಜನಾಂಗದ ಶಾಂತಿಯ ತೋಟ ಅಂತ ರಾಷ್ಟ್ರ ಕವಿ ಕುವೆಂಪು ಸಾಹಿತ್ಯ ಬರೆದಿದ್ದಾರೆ. ಎಲ್ಲಾ ಸಭೆ ಸಮಾರಂಭಗಳಲ್ಲಿ ಈ ಹಾಡನ್ನ ಹಾಡಲಾಗುತ್ತಿದೆ, ಆದರೆ, ಹಿಂದೂ, ಕ್ರೈಸ್ತ, ಮುಸಲ್ಮಾನ ಅಂತ ಸಾಲು ಇದೆ,ಇದು ಯಾರಿಗೂ ಅರ್ಥ ಆಗ್ತಿಲ್ಲ.ನಾಡಿಗೆ ಅಪಚಾರ ಆಗಬಾರದು, ಭವ್ಯ ನಾಡಿದು, ಇದನ್ನ ಕೆಲವರು ಕಂಟ್ರೋಲ್ ಗೆ ತಗೊಂಡಿದ್ದೇವೆ ಅಂತ ಅನ್ಕೊಂಡಿದ್ದಾರೆ ಎಂದು ಆರೋಪಿಸಿದರು.

ಒಂದಾದ ಮೇಲೆ ಒಂದು ನಡೀತಿದೆ. ಹಿಜಾಬ್, ದೇವಸ್ಥಾನ, ಹಲಾಲ್ ಕಟ್, ಜಟ್ಕಾ ಕಟ್ ಬಂತು, ಈಗ ಮಾವಿನ ಹಣ್ಣು ವಿಚಾರ ಬಂದಿದೆ. ನಾನು ನಮ್ಮ ತೋಟದಲ್ಲಿ ಮಾವಿನ ಹಣ್ಣನ್ನ ಮುಸ್ಲಿಂರಿಗೆ ಕೊಟ್ಟಿದ್ದೀನಿ ಎಂದು ತಿಳಿಸಿದರು.

ಒಬ್ಬ ಯುವಕನ ಹತ್ಯೆಯ ಬಗ್ಗೆ ಗೃಹ ಸಚಿವರು ನೀಡಿರುವ ಹೇಳಿಕೆ ಇಂಟೆಲಿಜೆನ್ಸ್ ಫೇಲ್ಯೂರ್ ಎಂದು ಭಾವಿಸಬೇಕಾಗುತ್ತೆ, ಉರ್ದು ಮಾತಾಡಿದ್ರು ಅಂತ ಚೂರಿ ಇರಿದಿದ್ದಾರೆ ಎಂದಿರುವುದು ತಪ್ಪು ವಾಟಾಳ್ ನಾಗರಾಜ್ ಟೀಕಿಸಿದರು.

More News

You cannot copy content of this page