Search

Yash Anti-Hero Role : ಯಶ್ ಗೆ ಮತ್ತೊಂದು ಆ್ಯಂಟಿ ಹಿರೋ ಪಾತ್ರದ ಆಫರ್..!

ಬೆಂಗಳೂರು:ಜ.30: ಕೆಜಿಎಫ್ ನಂತರ ನಟ ಯಶ್ ಸಿನಿಮಾ ಸ್ಕ್ರಿಪ್ಟ್  ಓದೋದ್ರಲ್ಲಿ ಬ್ಯುಸಿ ಇದ್ದಾರೆ.. ಕಥೆಗಳನ್ನು ಕೇಳಿ ಅಳೆದು ತೂಗಿ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ನಟ ಯಶ್ ಗೆ ಬಾಲಿವುಡ್ ನಿಂದ ಬಾರೀ ಬಜೆಟ್ ಸಿನಿಮಾ ಆಫರ್ ಬಂದಿದೆ.

ಕೆಜಿಎಫ್ ಸಿನಿಮಾದಲ್ಲಿ ನಟ ಯಶ್ ಆ್ಯಂಟಿ ಹೀರೋ ಅಂದ್ರೆ ಕಳ ನಾಯಕನ ಲುಕ್ ನಲ್ಲಿ ಮಿಂಚಿದ್ದರು.. ಅವರು ಜನರೆಡೆಗೆ ಎಸೆದ ಒಂದೊಂದು ಮಾತೂ ಸೋಷಿಯಲ್ ಮೀಡಿಯಾ ತುಂಬೆಲ್ಲಾ ಕ್ರೇಸ್ ಹುಟ್ಟಿಸಿದ್ದವು.. ಕೆಜಿಎಫ್ ನಲ್ಲಿ ಯಶ್ ಗೆಟಪ್ ಗೆ ಮನಸೋತ ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಮತ್ತೊಬ್ಬ ಕಳ ನಾಯಕನ ಪಾತ್ರದ ಆಫರ್ ನೀಡಿದ್ದು, ಅದರಲ್ಲಿ ನಟಿಸುವಂತೆ ಯಶ್ ಬೆನ್ನು ಬಿದ್ದಿದ್ದಾರೆ..

ಇತ್ತೀಚೆಗೆ ಬಹುತೇಕ ಸಿನಿಮಾ ಇಂಡಸ್ಟ್ರಿ ಪೌರಾಣಿಕ ಕಥೆಗಳ ನ್ನು ಎಣೆಯೋ ಕಸರತ್ತಿನಲ್ಲಿವೆ. ಇದರಿಂದ ಬಾಲಿವುಡ್ ಸಹ ಹೊರತಾಗಿಲ್ಲ..ಇದೀಗ ಮತ್ತೊಂದು ಪೌರಾಣಿಕ ಕಥೆ ರಾಮಾಯಣವನ್ನು ತೆರೆ ಮೇಲೆ ತರಲು ಬಾಲಿವುಡ್ ನ ಪ್ರತಿಭಾವಂತ ನಿರ್ದೇಶಕರ ನಿತೇಶ್ ತಿವಾರಿ ಕಸರತ್ತು ನಡೆಸುತ್ತಿದ್ದು, ರಣ್ಬೀರ್ ಕಪೂರ್ ರಾಮನಾಗಿ, ಹೃತಿಕ್ ರೋಷನ್ ರನ್ನು ರಾವಣನಾಗಿಯೂ ಊಹಿಸಿ ಚಿತ್ರಕತೆ ಸಿದ್ಧಪಡಿಸಿದ್ದಾರೆ.

ರಾಮನ ಪಾತ್ರಕ್ಕೆ ರಣ್ಬೀರ್ ಕಪೂರ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿತಾದ್ರು ರಾವಣನ ಪಾತ್ರ ನಿರ್ವಹಿಸಲು ನಟ  ಹೃತಿಕ್ ರೋಷನ್ ಹಿಂದಡಿ ಇಟ್ಟಿದ್ದಾರೆ. ಹೀಗಾಗಿ ರಾವಣನ ಪಾತ್ರವನ್ನು ನಿರ್ವಹಿಸುವಂತೆ ನಿತೇಶ್ ತಿವಾರಿ ಹಾಗೂ ಪ್ರಾಜೆಕ್ಟ್‌ನ ನಿರ್ಮಾಪಕ ಮಧು ಮಂತೇನಾ ಯಶ್‌ ಬಳಿ ಮನವಿ ಮಾಡಿದ್ದು, ಯಶ್, ಚಿತ್ರಕತೆ ಹಾಗೂ ತಮ್ಮ ಪಾತ್ರದ ಪೋಷಣೆ ಕುರಿತಂತೆ ವಿಶ್ಲೇಷಣೆಯಲ್ಲಿ ತೊಡಗಿದ್ದಾರೆ ಎನ್ನಲಾಗುತ್ತಿದೆ.

ಮಧು ಮಂತೇನಾ ಒಡೆತನದ ಮ್ಯಾನೇಜ್‌ಮೆಂಟ್ ಸಂಸ್ಥೆಯೇ ಯಶ್‌ ರ ಮೀಡಿಯಾ ಹಾಗೂ ಇತರ ವಿಷಯಗಳ ಮ್ಯಾನೇಜ್‌ಮೆಂಟ್ ಮಾಡುತ್ತಿದೆ.  ಇದೇ ಕಾರಣದಿಂದ ಮಧು ಮಂತೇನಾ ಯಶ್‌ ಅವರಿಗೆ ಚಿತ್ರಕತೆ ನೀಡಿ ಪಾತ್ರವನ್ನು ಒಪ್ಪಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರವನ್ನು ‘ವಿಲನ್‌’ ಎಂಬ ರೀತಿಯಲ್ಲಿ ಅಲ್ಲದೇ ‘ಮಾಸ್ ನಾಯಕ’ ಅಥವಾ ಆಂಟಿ ಹೀರೋ ರೀತಿಯಲ್ಲಿ ಬಿಂಬಿಸಲಾಗಿದೆ ಎನ್ನಲಾಗಿದ್ದು, ಯಶ್ ನಡೆ ಏನು ಅನ್ನೋದನ್ನು ಕಾದು ನೋಡ್ಬೇಕಿದೆ.

More News

You cannot copy content of this page