ದೇವಸ್ಥಾನ ಕ್ಕೆ ಹೋಗಿ ನೆಮ್ಮದಿ ಕೊಡಮ್ಮ.. ಶಾಂತಿ ಕೊಡು.. ವಿದ್ಯಾ ಬುದ್ದಿ ಕೊಡು ಎಂದೆಲ್ಲಾ ಕೇಳಿ, ಮನಸ್ಸು ಭಾರ ಕಡಿಮೆ ಮಾಡ್ಕೊಂಡು ಜನ ಬರ್ತಾರೆ. ಆದ್ರೆ ಇಲ್ಲೊಬ್ಬ ಭಕ್ತ ನಿನ್ನಂತೆ ನನ್ನನ್ನೂ ಬ್ಯೂಟಿಫುಲ್ ಆಗಿ ಕಾಣುವಂತೆ ಮಾಡಮ್ಮಾ ಎಂದು ಹರಕೆ ಕಟ್ಟಿದ್ದ ಘಟನೆ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕುನ ಕಳಸೇಶ್ವರ ದೇವಸ್ಥಾನ ದ ಗಿರಿಜಾದೇವಿ ಸನ್ನಿಧಿ ಗೆ ಮೊರೆ ಹೋದ ಭಕ್ತ ರಕ್ಷಿತ್ ಎಂಬಾತ ದೇವಿಯ ಮುಂದೆ ವಿಚಿತ್ರ ಬೇಡಿಕೆಯನ್ನ ಇಟ್ಟಿದ್ದಾನೆ. ತಾಯಿ…. ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು. ನನ್ನ ಸೌಂದರ್ಯದ ಹೊಣೆ ನಿಮ್ಮ ಜವಾಬ್ದಾರಿ. ನಾನು ಖ್ಯಾತ ನಟ, ಫ್ಯಾಷನ್ ಮಾಡೆಲ್ ಆಗಬೇಕು ಎಂದು ಬರೆದ ಪತ್ರ ಕಳಸದ ಕಳಸೇಶ್ವರ ಸ್ವಾಮಿಯ ಕಾಣಿಕೆ ಹುಂಡಿಯಲ್ಲಿ ಸಿಕ್ಕಿದೆ.
ಗಿರಿಜಾದೇವಿಗೆ ಪತ್ರ ಬರೆದಿರೋ ರಕ್ಷಿತ್ ಎಂಬ ಭಕ್ತ,
ಸರ್ವ ಸುಂದರಿಯಾದ ಗಿರಿಜಾದೇವಿಯಿಂದ ಆಶೀರ್ವಾದ ಬಯಸುತ್ತೇನೆ. ನನ್ನ ಕನಸನ್ನ ನನಸು ಮಾಡುವ ಜವಾಬ್ದಾರಿ ನಿಮ್ಮದು. ಈ ನಿನ್ನ ಭಕ್ತನ ಬೇಡಿಕೆ, ಪ್ರಾರ್ಥನೆಯನ್ನ ಈಡೇರಿಸು ತಾಯಿ ಎಂದು ವಿಚಿತ್ರ ಬೇಡಿಕೆ ಇಟ್ಟು ಬರೆದ ಪತ್ರವನ್ನು ಹುಂಡಿ ಎಣಿಗೆ ಮಾಡಲು ಬಂದ ಅಧಿಕಾರಿಗಳು ಕಂಡು ನಕ್ಕು ನಕ್ಕು ಸುಸ್ತಾದರು.