ಹುಬ್ಬಳ್ಳಿ: ಇಂದು ಜೆಡಿಎಸ್ ಪದಾಧಿಕಾರಿಗಳು, ಪ್ರಮುಖರ ಸಭೆಯನ್ನು ಕರೆಯಲಾಗಿದೆ.
ಬಿಜೆಪಿ ಮತ್ತು ಜೆಡಿಎಸ್ ಪ್ರಮುಖರು, ಕಾರ್ಯಕರ್ತರು ಸೇರಿ ಚುನಾವಣೆ ಮಾಡುತ್ತಿದ್ದೇವೆ.
ಕ್ಷೇತ್ರದಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಮತದಾರರನ್ನು ಭೇಟಿಯಾಗುತ್ತೇವೆ. ದೊಡ್ಡ ಮಹುಮತದಿಂದ ಬಿಜೆಪಿ ಗೆಲ್ಲಲಿದೆ.
ರಾಜ್ಯದ್ಯಂತ ಬಿಜೆಪಿ 28ಕ್ಕೆ 28 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳುದರು.
ಕಾಂಗ್ರೆಸ್ ಪಾರ್ಟಿಯವರು ಹತಾಶರಾಗಿ ಅತ್ಯಂತ ಕ್ಷುಲ್ಲಕ ಭಾಷೆಯಿಂದ ಮಾತಾಡಲು ಆರಂಭಿಸಿದ್ದಾರೆ. ಮೋದಿಯವರ ಬಗ್ಗೆ ಎಷ್ಟು ಕ್ಷುಲ್ಲಕ ಭಾಷೆ ಬಳಸುತ್ತಾರೋ ಅಷ್ಟು ಮೋದಿಯವರ ಜನಪ್ರಿಯತೆ ಹೆಚ್ಚುತ್ತದೆ. ಬಿಜೆಪಿಯ ಕಾರ್ಯಕರ್ತರು ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಬಿಜೆಪಿಯಲ್ಲಿ ಕೆಲವು ಕ್ಷೇತ್ರಗಳಲ್ಲಿ ದುಃಖ, ದುಮ್ಮಾನ, ಬಂಡಾಯ ಇದೆ. ಎಲ್ಲಾ ಕಡೆ ಮಾತುಕತೆ ಮಾಡಲಾಗಿದೆ.
ದಾವಣಗೆರೆ ಮಾತುಕತೆಯಾಗಿದೆ, ರಾಯಚೂರು ಬಾಕಿ ಉಳಿದಿದೆ ಅದನ್ನೂ ಸರಿ ಮಾಡುತ್ತೇವೆ ಎಂದರು.